• ಯಾರು ತಿಳಿಯರು!

    ಇವತ್ ಆಫಿಸಿಂದ ಮನೆಗೆ ಬರ್ತಿದ್ದೆ. ದಾರಿಲಿ ಜನ ಮರದಡಿ ನಿಂತು ಬೀಳೊ ಮಾವಿನಕಾಯಿ ಆರಿಸ್ಕೊತಿದ್ರು. ನಾನು ಮಂಗನಂಗೆ "ನನ್ನ ಮೇಲೆ ಏನೂ ಬೀಳಲ್ಲ" ಅಂತ ಅಂದುಕೊಂಡು, ಅದೇ ಮರದ ಕೆಳಗೆ ಬೈಕಲ್ಲಿ ಹೋದೆ. ನೋಡಿದ್ರೆ ಮೇಲಿಂದ ಮಾವಿನಕಾಯಿ ಬಂದು ರಪ್ ಅಂತ ನನ್ನ ಕೈಗೆ ಹೊಡಿತು. ನಾನು ಬೈಕ್ ನಿಲ್ಸಿ ಸಿಟ್ಟಲ್ಲಿ ತಿರುಗಿ, "ಯಾರು ತಿಳಿಯರು ನನ್ನ, ಭುಜಬಲದ ಪರಾಕ್ರಮ?" ಅಂತ, ಯಾರಮೇಲೆ ರೇಗಾಡಬೇಕು ಅಂತ ನೋಡ್ತಿದ್ದೆ. 'ಕೆಳಗಿರೋರು ನಗ್ತಾ...


  • ತೇಜಸ್ವಿ ಮನೆ

    ಅದು ೨೦೧೬ನೇ ಇಸವಿ. ಕಾಲೇಜು ಮುಗಿದು ಮೂರು ವರುಷಗಳಾಗುತ್ತಿದ್ದ ಕಾಲ. ಆ ವರುಷದ ಬೇಸಿಗೆ ಬಹಳ ಬಿರುಸಾಗಿತ್ತು. ಇಡೀ ಬೇಸಿಗೆಯಲ್ಲಿ ಹೊರಗೆಲ್ಲೂ ಅಡ್ಡಾಡೋಕೆ ಹೋಗದೆ, ಬರೀ ಮನೆ, ಕೆಲಸ ಇಷ್ಟರಲ್ಲೇ ಇತ್ತು. ಅಂತೂ ಬೇಸಿಗೆ ಮುಗಿಯುವ ಹೊತ್ತಿಗೆ, ಗೆಳೆಯರೆಲ್ಲ ಮನಸ್ಸು ಮಾಡಿ, ಎತ್ತ ಕಡೆಯಾದರೂ ತಿರುಗಾಡೋಕೆ ಹೋಗೋಣ ಎಂದು, ಒಂದು ಶುಕ್ರವಾರದ ರಾತ್ರಿ ಊರು ಬಿಟ್ಟು ಹೊರಟೆವು. ಒಂಬತ್ತು ಗಂಟೆ ಬೆಂಗಳೂರ ಬಿಟ್ಟಾಗ, ಸಕಲೇಶಪುರ ತಲುಪಿದಾಗ ನಡುರಾತ್ರಿ ಮೂರು ಗಂಟೆ...


  • ಜೊತೆ

    ಜೊತೆಯಾಗಬೇಕು ಎದೆಗೆ ಎದೆ, ತೊಡೆಗೆ ತೊಡೆ, ತೋಳಿಗೆ ತೋಳು ತಟ್ಟಿ, ಜೊತೆ ನಿಲ್ಲೋಳು. ಬೆಟ್ಟ, ಕಾಡು, ಕಣಿವೆ, ನಾಡಲ್ಲೂ ನೆರಳಾಗಿರೋಳು. ಮುಗಿಲೆತ್ತರದ ಬೆಟ್ಟ ಏರೋಳು, ಕಡಲಾಳಕೆ ಈಜೋಳು, ಜೊತೆಯಾಗಬೇಕು ಬದುಕಿಗೆ ಇಂತೋಳು. ಊರೊಂದಿಗಿನ ಕಾಳಗದಲಿ ಬೆನ್ನಿಗಿರೋಳು, ತುಂಬಿಕೊಂಡು ಸಿಡುಗೋಪ ಕಂಗಳ. ಮೃದುವಾಗಿ ದಿನದಿನವೂ ಹೂಗಳ ಬೆಳೆಸೋಳು, ತುಂಬುಂವಂತೆ ಮನೆಯಂಗಳ. ಜೊತೆಯಾಗಬೇಕು ಎದೆಗೆ ಎದೆ, ತೊಡೆಗೆ ತೊಡೆ, ತೋಳಿಗೆ ತೋಳು ತಟ್ಟಿ, ಜೊತೆ ನಿಲ್ಲೋಳು. ಬದುಕಿನ ಬೆಳಕಲ್ಲಿ ನೆರಳಾಗಿರೋಳು, ಕತ್ತಲೆಯಲ್ಲಿ ಅರಿವಾಗುವವಳು,...


  • ಗೋಡೆ

    ದೊಡ್ಡ ಗೋಡೆಯೊಂದಿರಬೇಕು ಮನೆಯಲಿ. ಹಳೆ ನೆನಪು ಮೆಲುಕು ಹಾಕಲು. ಮನದ ಮೇಲೆ ಗೀಚಿದ, ಕಲೆಗಳ ಅಳಿಸಲು. ದೊಡ್ಡ ಗೋಡೆಯೊಂದಿರಬೇಕು ಮನೆಯಲಿ, ಎಲ್ಲೂ ಆಡದ ಮಾತ ಬರೆಯಲು, ಯಾರೂ ಕೇಳದ ಗುಟ್ಟ ತೆರೆಯಲು. ಬಿಳಿ ಗೊಡೆ ಇರಬೇಕು ಮನೆಯಲಿ, ಮನದ ಬಣ್ಣ ಎರಚುತಿರಲು, ಮನಸನ್ನು ಮತ್ತೆ ತಿಳಿ ಮಾಡಲು. - ಆದರ್ಶ


  • ಓಟ

    ಬಿರುಗಾಳಿಯಂತ ನಡೆ, ಬಿರುಸಾದ ನುಡಿ. ಬೆಂಕಿಯಂತ ನೋಟ, ಇಂತವಳ್ಹಿಂದೆ ಎಲ್ಲ ಓಟ. ಹಗುರ ನಡೆ, ಬಿಗಿಯಲ್ಲ ಜಡೆ, ಇರದು ಒಪ್ಪುವ ಒಳನೋಟ, ಇಂತವಳಿಂದ ದೂರ ಓಟ. - ಆದರ್ಶ