ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಹುಡುಗಿಯಲ್ಲಿ ಒಲವು
ನರಕದಲ್ಲಿ ಸ್ವರ್ಗ ಇದ್ದಂಗೆ, ನೋವಲ್ಲೂ ನಲಿವಿದ್ದಂಗೆ, ಘೋರದಲಿ ಮುದ್ದು ಮಾಡಿದಂಗೆ, ಹುಡುಗಿಯಲ್ಲಿ ಒಲವು. ಬೇಸಿಗೆಯಲಿ ಚಳಿ ಆದಂಗೆ, ಕಡಲಲ್ಲಿ ಸಿಹಿ ನೀರು ಸಿಕ್ಕಂಗೆ. ನಿಸ್ಸಾರದಲಿ ಸೊಗಸು ಇದ್ದಂಗೆ, ಹುಡುಗಿಯಲ್ಲಿ ಒಲವು. ಕೊನೆಯಲ್ಲಿ ಬದುಕಿದಂಗೆ, ಮುಳುಗಿದ ಮೇಲೆ ಎದ್ದಂಗೆ, ಅರಳುವಾಗ ಹೂವ ಹರಿದಂಗೆ, ಹುಡುಗಿಯಲ್ಲಿ ಒಲವು. - ಆದರ್ಶ
-
ಕರ್ಮ
ನಾ ಸಣ್ಣೋನಾಗಿದ್ದಗಿಂದಲೂ 'ನಮ್ಮ ಕರ್ಮ', 'ನಮ್ಮ ಹಣೆಬರಹ' ಅನ್ನೋದ ಕೇಳ್ತಾ ಬಂದಿದ್ದೀನಿ. ಇತ್ತೀಚಿಗೆ ಕರ್ಮ, ಹಣೆಬರಹ ಅಂದ್ರೆ ಏನು ಅಂತ ಸ್ವಲ್ಪ ತಿಳುವಳಿಕೆಗೆ ಬಂದಾಗಿಂದ ಇವುಗಳ ಬಗ್ಗೆ ಯೋಚನೆ ಮಾಡ್ತಾ ಒಂದಷ್ಟು ಕಾಲನೂ ಕಳೆದಾಗಿದೆ. ಈ ಸಾಲುಗಳೆಲ್ಲ ಆ ಯೋಚನೆಗಳಿಂದ ಬಂದಿರೋದು. ಹಣೆಬರಹ ಅನ್ನೋದು ನಾವು ಹುಟ್ಟೋ ಮೊದಲೇ ನಿರ್ಧಾರವಾಗಿರೋದು, ನಮ್ಮ ಹಣೆಬರಹ ಎಂಬೋದು ದೇವರು ನಮಗಾಗೆ ಬರೆದು ಕಳಿಸಿರೋದು. ಹಣೆಬರಹವನ್ನು ನಾವು ಮೊದಲೇ ಪೂರ್ತಿಯಾಗಿ ಓದಿ ತಿಳಿಯೋದಕ್ಕಾಗಲ್ಲ, ಕಾಲಕಾಲಕ್ಕೆ...
-
ಚಳಿಗಾಲ
ಚಳಿಗಾಲ ಹುಡುಗಿ, ಬಂದಿಲ್ಲಿ ನಿಲ್ಲು, ಆ ದೂರ ಯಾಕೆ, ತೋರಿಸುವೆ ಕಾಮನಬಿಲ್ಲು. ಹುಚ್ಚು ಒಲವ ಒಳಗೆಯೇ, ಇಟ್ಟಿರುವೆ ಯಾಕೆ, ನೀ ಬಳಿಬಂದರೆ, ಹೊತ್ತಿಕೊಳ್ಳುವುದೀ ಬದುಕೆ. ಅರೆಕಾಲ ಬಂದೋಗು, ಮಳೆಯಂತೆ ನೀನು, ನೂರ್ಕಾಲ ನೆನಯುವೆ, ಭುವಿಯಂಗೆ ನಾನು. ಚಳಿಗಾಲಕೆ ನೀ, ಹತ್ತಿರ ಬರಲೆಂಬ ಹರಕೆ, ನಿನ್ನ ಸುತ್ತ ತಿರುಗಿರುವೆ, ನಾನಿಂದು ಅದಕೆ. - ಆದರ್ಶ
-
ಏನಿದು?
ಜೀವನದಲ್ಲಿ ನನ್ನ ಪ್ರಕಾರ ಮುಖ್ಯವಾಗಿ ಬೇಕಾಗಿರುವ ಒಂದು ಗುಣ ಅಂತ ಅಂದ್ರೆ ನಂಬಿಕೆ. ನಾವು ಇನ್ನೊಬ್ಬರ ಮೇಲೆ ನಂಬಿಕೆ ಇಡುವುದಕ್ಕಿಂತ, ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾದದ್ದು ಅಂತ ನನ್ನ ಅಭಿಪ್ರಾಯ. ನೀವೇ ಒಂದು ಸನ್ನಿವೇಶದ ಬಗ್ಗೆ ಯೋಚನೆ ಮಾಡಿ, ನಿಮಗೆ ಮೊದಲನೇ ಬಾರಿಗೆ ಯಾರೊಬ್ಬರದ್ದು ಪರಿಚಯ ಆಗಿರುತ್ತದೆ, ಅವರು ನಿಮ್ಮ ಹತ್ತಿರ ಬಂದು ಸ್ವಲ್ಪ ಹಣ ಕೊಡು ಅಂತ ಕೇಳಿಕೊಳ್ಳುತ್ತಾರೆ ಅಂದುಕೊಳ್ಳೋಣ, ನೀವು ಅವರಿಗೆ ಹಣ...
-
Mistakes of my Chatni
ಚಟ್ಣಿ ಮಾಡೋದನ್ನ ಸಣ್ಣೋನಾಗಿದ್ದಾಗಿಂದ್ಲೂ ದೂರದಿಂದ ನೋಡ್ತಿದ್ದಿದ್ದೆ ನೆನಪು. ಒಳಕಲ್ಲಲ್ಲಿ ಕಾರ ಅರಿತಿದ್ದ ನೋಡ್ಕೊಂಡು ಕೂತಿರತಿದ್ದೆ. ಆ ಕಲ್ಲ ತಿರುಗಿಸೋಕೆ ನನ್ನ ಕೈಗಿತ್ತರೆ ಅದರಲ್ಲಿ ಒಂದು ಸಂತಸ. ಬಹಳ ಕೇಳಿದ್ರೆ ಕಲ್ಲು ತಿರುಗಿಸೋಕೆ ಕೊಡೋರು, ಆದ್ರೆ ಕೈ ಹಾಕಿ ಪದಾರ್ತಗಳ ಒಳಕ್ಕೆ ದಬ್ಬೋಕೆ ಬಿಡ್ತಿರಲಿಲ್ಲ. ಹಂಗೆನಾರು ಬಿಟ್ರೆ ಅದರಲ್ಲಿ ಬೆರಳು ಇರುಕಿಸಿಕೊಳ್ಳದೆ ಪದಾರ್ಥಗಳ ದಬ್ಬಿದ್ರೆ ಅದು ಇನ್ನೊಂದು ಸಾಧನೆ ಮಾಡಿದಂಗೆ ಅನ್ಸೋದು. ಒಂದಶ್ಟು ವರ್ಶ ಕಳೆದು, ಸ್ವಲ್ಪ ದೊಡ್ಡೋನಾದ್ಮೇಲೆ, ನಂಗೆ ಕಲ್ಲಲ್ಲಿ...