• ಮರಳಿ ಗೂಡಿಗೆ

    ಲಿಫ್ಟ್ನಲ್ಲಿ UB ಅಂತ ಒತ್ತಿ ಲಿಫ್ಟ್ನಿಂದ ಆಚೆ ಬಂದವ್ನಿಗೆ ಬೈಕ್ ಎಲ್ಲಿಟ್ಟಿದೀನಿ ಅಂತಾನೆ ನೆನಪ್ ಹೋಗಿತ್ತು. ಮುಂಚೆ ಎಲ್ಲಾ UB ನಲ್ಲಿ ಇಟ್ಟಿದೀನ ಇಲ್ಲ LB ನ ಅಂತ ಡೌಟ್ ಇರ್ತಾ ಇದ್ದವನಿಗೆ ಇವತ್ತು UB ಅಂತ ನೆನಪಿತ್ತು. ಸರಿ, ಬೆಳಿಗ್ಗೆ ಬರುವಾಗ ಏನೆಲ್ಲಾ ಆಯ್ತು ಅಂತ ರೀ ಕ್ರಿಯೇಟ್ ಮಾಡಣ ಅಂತ ನಿಂತ್ಕೊಂಡೆ. ನನ್ನ ಎಡಭಾಗದಲ್ಲಿದ್ದ ಎಂಟ್ರೆನ್ಸ್ ನಿಂದ ಬಂದವ್ನು ಇನ್ನೇನ್ ರೈಟ್ ಹೊಡೀಬೇಕು ಅಂತ ಇದ್ದಾಗ ಸ್ವಲ್ಪ....


  • ಕನಸಿನ ಬಾಗಿಲು

    ಹೊತ್ತ ಭಾರ ಇಳಿದು ಹಗುರಾಯ್ತು ಹೆಗಲು, ಇಳಿಸಂಜೆ ನೇಸರ ಮುಳುಗಿ ಕೆಂಪಾದಂಗೆ ಮುಗಿಲು. ಗಗನ ಕೂಗಿ ಸುರಿಸೆ ತನ್ನೆಲ್ಲ ಅಳಲು, ಬೆಳಕು ಬೀರಿ ಬೆರಗು ದಾಟಿದೆ ಕನಸಿನ ಬಾಗಿಲು. ಹರಿವಂತೆ ಹೊಳೆ, ಕಂಡಾಗ ಕಡಲ, ಓಡಿತ್ತು ಈ ಮನ, ನಿಲುಗಡೆ ನೋಡಲು. ಬೆಳಕಿಗೆ ಎಚ್ಚೆತ್ತ ಇರುಳು, ಕಾಣಲು ಹೊರಟಂತೆ ಹಗಲ, ಮರುಳು ಮನದ ಹವಣಿಕೆ ದಾಟಿದೆ ಕನಸಿನ ಬಾಗಿಲ. - ಆದರ್ಶ


  • ಕಾಲ್ಗುಣ

    ನಡೆಯೋದ ಕಲಿಸಿದ ಅಂಬೆಗಾಲು, ನಿಬ್ಬೆರಗಾಗಿ ಓಡಲು ಕಾರಣ ಕಾಲು, ಬಿದ್ದಾಗ ಏಳೋದ, ಎದ್ದಾಗ ಬೀಳದಿರೋದ, ಹಿಗ್ಗಿದಾಗ ನಲಿದು ಕುಣಿಯೋದೇ ಕಾಲು. ಮುಗಿಲ ಮುಟ್ಟೋದು ಗೋಪುರವಾದರೂ, ನೆಲೆ ನಿಲ್ಲಿಸೋ ತ್ರಾಣ ಕಂಬಗಳದು.. ಹೂವ ಮುಡಿಸೋದು ದೇವರ ಮುಡಿಗಾದರೂ, ನಾವು ಪಾದಗಳಿಗೆ ಅಡ್ಡಬಿದ್ದು ಶರಣೆನ್ನೋದು. ಮೂರು ಹೆಜ್ಜೆಗೆ ಮೂರು ಲೋಕ ಆಳಿದ್ದು ಕಾಲು, ಕಾಳಗದಿ ಹಿಡಿದಾಗ ಉಳಿಸಿದ್ದು ಕಾಲು. ಕಾಲ ತಾಕಿಸೆ ತಪ್ಪೆನ್ನಬೇಡ ನೆಗೆದು, ಸಿರಿದೇವಿಯೇ ನಲಿವ ಕಾರಣ ಕಾಲಗುಣದ್ದು. - ಆದರ್ಶ...


  • ಬಿಗುಮಾನ

    ೨೦೧೪ ಕಾಲೇಜು ಮುಗಿದಮೇಲೆ ಮೊದಲನೇ ಸರಿ ಇಂಟರ್ವ್ಯೂ ಒಂದನ್ನ ಪಾಸ್ ಮಾಡಿ ಕೆಲಸ ತಗೊಂಡಿದ್ದೆ. ಕೆಲಸಕ್ಕೆ ಸೇರಿದ ಮೊದಲಿಗೆ ಟ್ರೈನಿಂಗ್ ಕೊಡ್ತೀವಿ, ಪಾಸ್ ಆದ್ರೆ ಕೆಲಸ ಮುಂದುವರಿಯುತ್ತೆ, ಬಟ್ಟೆ-ಬರೆ ಎತ್ತ್ಕಂಡು ಮನೆ ಬಿಟ್ಟು ಮುಂಬಯಿ ಗೆ ಓಡಿ ಬಾ ಅಂತ ಸುದ್ದಿ ಕಳ್ಸಿದ್ರು. ಅಲ್ಲಿವರೆಗೆ ಒಬ್ಬನೇ ಕರ್ನಾಟಕ ಬಿಟ್ಟು ಹೋಗಿರಲಿಲ್ಲ. ಮನೆವ್ರು, ಗೆಳೆಯರೆಲ್ಲ ಸೇರಿ "ನೀ ಮೊದ್ಲು ಇಲ್ಲಿಂದ ಹೋಗು" ಅಂತ ಕಳ್ಸಿದ್ರು. ನಾನೂ ಹೊರಟೆ. ರೈಲು ಠಾಣೆ ಎಂಬ...


  • ಕೊನೆ ದಿನ

    ಮಳೆಯಾದ ನೀರು ಮತ್ತೆ ಆವಿಯಾಗುವುದೇ, ಕಡಲ ಸೇರಿದ ಹೊಳೆ ಮತ್ತೆ ಹುಟ್ಟುವುದೆ? ಬೆಳಗುವ ನೇಸರ ಮುಳುಗಿದ ಮೆಲೆ ಏನು, ಕತ್ತಲು ಕಳೆಯಲು ಕಾಯುವ ಕಾತುರದ ಕೊನೆ ದಿನ ನಮ್ಮದೆ. ಎಲೆ ಬಿದ್ದ ಮೇಲೆ ಮರ ಚಿಗುರದೆ, ಹೂವು ಹರಿದಮೇಲೆ ಹೊಸದರಳದೆ? ಬೆಳೆದ ಮರ ಉರುಳಿದ ಮೇಲೆ ಏನು? ನೆರಳ ನೀಡುವಂತೆ ಬೆಳೆವ ಹಂಬಲದ ಕೊನೆ ದಿನ ನಮ್ಮದೆ. ಬೆಟ್ಟ ಹತ್ತಿ, ಬೆಟ್ಟವ ಇಳಿದರೆ, ಕಣಿವೆಯ ಕತ್ತಲು ಕವಿಯದೆ? ನೇಸರ ಮುಳುಗಿ...