ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ನಾ ಬಿದ್ದೆ
ಅದೊಂದು ದಿನ ಮುಂಜಾನೆ ಹೊರಟು ಕೊಟ್ಟಿಗೆಹಾರಕ್ಕೆ ಹೋಗ್ಬೇಕಿತ್ತು. ಅದಕ್ಕಾಗಿ ಬೇಗ ಎದ್ದು ರೆಡಿಯಾಗಿ ಆರು ಗಂಟೆಗೆ ಮನೆ ಬಿಟ್ಟು , ಏಳು ಗಂಟೆ ಹೊತ್ತಿಗೆ ಬೆಂಗಳೂರ ಹೊರಗಿದ್ದ ಗೆಳೆಯನ ಮನೆಗೆ ತಲುಪಿ , ಅಲ್ಲಿ ನನ್ನ ಬೈಕನ್ನ ನಿಲ್ಲಿಸಿ ಅಲ್ಲಿಂದ ಮುಂದಕ್ಕೆ ಎಲ್ರೂ ಕಾರಲ್ಲಿ ಹೋಗೋರಿದ್ವಿ. ಮನೆ ಬಿಟ್ಟು ಹತ್ತು ನಿಮಿಷಕ್ಕೆ ಒಂದು ಸಣ್ಣ ಸೋನೆ ಮಳೆ ಬಿತ್ತು. ಬೈಕ್ ನಿಲ್ಲಿಸಿ ಮಳೆ ಕೋಟು ಪ್ಯಾಂಟು ಹಾಕ್ಕೊಳ್ಳಲಾ ಅತವಾ ಹಂಗೆ...
-
ತ್ರಿಶೂರ್
ಬೆಂಗಳೂರು ಬೆಳಗ್ಗೆ ೬ ಗಂಟೆಗೆ ಎದ್ದು ಸಚಿನ್ ನಂಗೆ ಫೋನ್ ಮಾಡಿ, ತ್ರಿಶೂರಲ್ಲಿ ನಡಿಯೋ 'ಪೂರಮ್' ಜಾತ್ರೆಗೆ ಹೋಗೋಣ್ವ ಅಂದ. ಸರಿ, ವಿಷ್ಣು ನೂ ಕೇಳೋಣ ಅಂದು ಅವ್ನಿಗೂ ಫೋನ್ ಮಾಡಿದ್ವಿ. ವಿಷ್ಣು ನೂ ಹೊರಡೋಣ ಅಂದು ಅರ್ಧ ಗಂಟೆಯಲ್ಲಿ ಸಿದ್ದರಾಗಿ ಮನೆ ಬಿಟ್ವಿ. ದಾರಿಲಿ ನಮ್ಮ ದೇಶದ "ಅತೀ ದೊಡ್ಡ ಹೊಟೇಲ್" ಅಂತ ಹೇಳ್ಕೋಂಡು ಓಡಾಡ್ತೀರೊ ರಾಮೇಶ್ವರಂ ಕೆಫೆಲಿ ತಿಂಡಿ ತಿಂದು ತಮಿಳುನಾಡಿನ ಕಡೆಗೆ ಹೊರಟ್ವಿ. ತಿಂಡಿ ತಕ್ಕ...
-
ಮದುವೆ ಗಿದುವೆ ಇತ್ಯಾದಿ
"ಗೇರ್ ಲೆಸ್ ಗಾಡಿ ತಗೊಳ್ಳ, ಇಲ್ಲಾ ಬೈಕ್ ತಗೊಳ್ಳ, ಇಲ್ಲಾ ಸಕೇಂಡ್ ಹ್ಯಾಂಡ್ ಕಾರ್ ತಗೊಂಡ್ ಬಿಡ್ಲ " ಅಂತ ಫ್ರೆಂಡ್ ಒಬ್ಬ ಫೋನ್ ಮಾಡಿ ಕೇಳಿದಾಗ , "ಗುರು ಈ ಟ್ರಾಫಿಕ್ ನೋಡ್ತಾ ಇದ್ರೆ ಬೈಕ್ ಬದ್ಲು ಆಂಬುಲೆನ್ಸ್ ನಲ್ಲಿ ಹೋಗೋದು ಬೆಟರ್ ಅನ್ಸುತ್ತೆ. ಮನೆ ಬಿಡ್ತೀವಿ ಆಫೀಸ್ ಮುಟ್ತಿವೋ ಇಲ್ವೋ ಗೊತ್ತಾಗಲ್ಲ, ಆಫೀಸ್ ಬಿಡ್ತೀವಿ ಮನೆ ಸೇರ್ತಿವೋ ಇಲ್ವೋ ಗೊತ್ತಾಗಲ್ಲ" ಅಂತ ಹೇಳ್ದೆ. ಅದಕ್ಕವನು ಹೋಗೋಗಿ ನಿಂಗ್...
-
ಮರಳಿ ಗೂಡಿಗೆ
ಲಿಫ್ಟ್ನಲ್ಲಿ UB ಅಂತ ಒತ್ತಿ ಲಿಫ್ಟ್ನಿಂದ ಆಚೆ ಬಂದವ್ನಿಗೆ ಬೈಕ್ ಎಲ್ಲಿಟ್ಟಿದೀನಿ ಅಂತಾನೆ ನೆನಪ್ ಹೋಗಿತ್ತು. ಮುಂಚೆ ಎಲ್ಲಾ UB ನಲ್ಲಿ ಇಟ್ಟಿದೀನ ಇಲ್ಲ LB ನ ಅಂತ ಡೌಟ್ ಇರ್ತಾ ಇದ್ದವನಿಗೆ ಇವತ್ತು UB ಅಂತ ನೆನಪಿತ್ತು. ಸರಿ, ಬೆಳಿಗ್ಗೆ ಬರುವಾಗ ಏನೆಲ್ಲಾ ಆಯ್ತು ಅಂತ ರೀ ಕ್ರಿಯೇಟ್ ಮಾಡಣ ಅಂತ ನಿಂತ್ಕೊಂಡೆ. ನನ್ನ ಎಡಭಾಗದಲ್ಲಿದ್ದ ಎಂಟ್ರೆನ್ಸ್ ನಿಂದ ಬಂದವ್ನು ಇನ್ನೇನ್ ರೈಟ್ ಹೊಡೀಬೇಕು ಅಂತ ಇದ್ದಾಗ ಸ್ವಲ್ಪ....
-
ಕನಸಿನ ಬಾಗಿಲು
ಹೊತ್ತ ಭಾರ ಇಳಿದು ಹಗುರಾಯ್ತು ಹೆಗಲು, ಇಳಿಸಂಜೆ ನೇಸರ ಮುಳುಗಿ ಕೆಂಪಾದಂಗೆ ಮುಗಿಲು. ಗಗನ ಕೂಗಿ ಸುರಿಸೆ ತನ್ನೆಲ್ಲ ಅಳಲು, ಬೆಳಕು ಬೀರಿ ಬೆರಗು ದಾಟಿದೆ ಕನಸಿನ ಬಾಗಿಲು. ಹರಿವಂತೆ ಹೊಳೆ, ಕಂಡಾಗ ಕಡಲ, ಓಡಿತ್ತು ಈ ಮನ, ನಿಲುಗಡೆ ನೋಡಲು. ಬೆಳಕಿಗೆ ಎಚ್ಚೆತ್ತ ಇರುಳು, ಕಾಣಲು ಹೊರಟಂತೆ ಹಗಲ, ಮರುಳು ಮನದ ಹವಣಿಕೆ ದಾಟಿದೆ ಕನಸಿನ ಬಾಗಿಲ. - ಆದರ್ಶ