• ಕಾಲ್ಗುಣ

    ನಡೆಯೋದ ಕಲಿಸಿದ ಅಂಬೆಗಾಲು, ನಿಬ್ಬೆರಗಾಗಿ ಓಡಲು ಕಾರಣ ಕಾಲು, ಬಿದ್ದಾಗ ಏಳೋದ, ಎದ್ದಾಗ ಬೀಳದಿರೋದ, ಹಿಗ್ಗಿದಾಗ ನಲಿದು ಕುಣಿಯೋದೇ ಕಾಲು. ಮುಗಿಲ ಮುಟ್ಟೋದು ಗೋಪುರವಾದರೂ, ನೆಲೆ ನಿಲ್ಲಿಸೋ ತ್ರಾಣ ಕಂಬಗಳದು.. ಹೂವ ಮುಡಿಸೋದು ದೇವರ ಮುಡಿಗಾದರೂ, ನಾವು ಪಾದಗಳಿಗೆ ಅಡ್ಡಬಿದ್ದು ಶರಣೆನ್ನೋದು. ಮೂರು ಹೆಜ್ಜೆಗೆ ಮೂರು ಲೋಕ ಆಳಿದ್ದು ಕಾಲು, ಕಾಳಗದಿ ಹಿಡಿದಾಗ ಉಳಿಸಿದ್ದು ಕಾಲು. ಕಾಲ ತಾಕಿಸೆ ತಪ್ಪೆನ್ನಬೇಡ ನೆಗೆದು, ಸಿರಿದೇವಿಯೇ ನಲಿವ ಕಾರಣ ಕಾಲಗುಣದ್ದು. - ಆದರ್ಶ...


  • ಬಿಗುಮಾನ

    ೨೦೧೪ ಕಾಲೇಜು ಮುಗಿದಮೇಲೆ ಮೊದಲನೇ ಸರಿ ಇಂಟರ್ವ್ಯೂ ಒಂದನ್ನ ಪಾಸ್ ಮಾಡಿ ಕೆಲಸ ತಗೊಂಡಿದ್ದೆ. ಕೆಲಸಕ್ಕೆ ಸೇರಿದ ಮೊದಲಿಗೆ ಟ್ರೈನಿಂಗ್ ಕೊಡ್ತೀವಿ, ಪಾಸ್ ಆದ್ರೆ ಕೆಲಸ ಮುಂದುವರಿಯುತ್ತೆ, ಬಟ್ಟೆ-ಬರೆ ಎತ್ತ್ಕಂಡು ಮನೆ ಬಿಟ್ಟು ಮುಂಬಯಿ ಗೆ ಓಡಿ ಬಾ ಅಂತ ಸುದ್ದಿ ಕಳ್ಸಿದ್ರು. ಅಲ್ಲಿವರೆಗೆ ಒಬ್ಬನೇ ಕರ್ನಾಟಕ ಬಿಟ್ಟು ಹೋಗಿರಲಿಲ್ಲ. ಮನೆವ್ರು, ಗೆಳೆಯರೆಲ್ಲ ಸೇರಿ "ನೀ ಮೊದ್ಲು ಇಲ್ಲಿಂದ ಹೋಗು" ಅಂತ ಕಳ್ಸಿದ್ರು. ನಾನೂ ಹೊರಟೆ. ರೈಲು ಠಾಣೆ ಎಂಬ...


  • ಕೊನೆ ದಿನ

    ಮಳೆಯಾದ ನೀರು ಮತ್ತೆ ಆವಿಯಾಗುವುದೇ, ಕಡಲ ಸೇರಿದ ಹೊಳೆ ಮತ್ತೆ ಹುಟ್ಟುವುದೆ? ಬೆಳಗುವ ನೇಸರ ಮುಳುಗಿದ ಮೆಲೆ ಏನು, ಕತ್ತಲು ಕಳೆಯಲು ಕಾಯುವ ಕಾತುರದ ಕೊನೆ ದಿನ ನಮ್ಮದೆ. ಎಲೆ ಬಿದ್ದ ಮೇಲೆ ಮರ ಚಿಗುರದೆ, ಹೂವು ಹರಿದಮೇಲೆ ಹೊಸದರಳದೆ? ಬೆಳೆದ ಮರ ಉರುಳಿದ ಮೇಲೆ ಏನು? ನೆರಳ ನೀಡುವಂತೆ ಬೆಳೆವ ಹಂಬಲದ ಕೊನೆ ದಿನ ನಮ್ಮದೆ. ಬೆಟ್ಟ ಹತ್ತಿ, ಬೆಟ್ಟವ ಇಳಿದರೆ, ಕಣಿವೆಯ ಕತ್ತಲು ಕವಿಯದೆ? ನೇಸರ ಮುಳುಗಿ...


  • ಬಾಲ್ಯದ ಮಳೆಗಾಲ

    ನಾನು ಸಣ್ಣವಳಿದ್ದಾಗ ನಮ್ಮದು ಕೂಡು ಕುಟುಂಬ, ಮನೆಯಲ್ಲಿ ೫ ಜನ ಮಕ್ಕಳು. ಮಳೆಗಾಲ ಬಂತಂದ್ರೆ, ಅಜ್ಜ ಅಜ್ಜಿಗೆ ಉಳುಮೆ ನಾಟಿಗೆ ಆಳು ಹುಡುಕುವ ಮಂಡೆ ಬಿಸಿ, ಆದರೆ ನಮಗೆ ಬೇಸಿಗೆ ರಜೆ ಪೂರ್ತಿಯ homework ಎರಡೇ ದಿನದಲ್ಲಿ ಮುಗಿಸುವ ತರಾತುರಿ. ಅಜ್ಜ ಕರೆಸಿದ ಗದ್ದೆ ಉಳುವವ ಜೋಡಿ ಎತ್ತಿಗೆ 'ಎಡತ್' 'ಬಲತ್' ಅಂತ ಸೂಚನೆ ಕೊಟ್ಟು ಊಳುತ್ತಿರುವಾಗ ನಮ್ಮ ತಮ್ಮ 'ಅನ್ನು' ನೇಗಿಲ ಮೇಲೆ ನಿಂತು ಅವನ ಸಾಹಸ ಪ್ರದರ್ಶನ...


  • ಹುಡುಗಿಯಲ್ಲಿ ಒಲವು

    ನರಕದಲ್ಲಿ ಸ್ವರ್ಗ ಇದ್ದಂಗೆ, ನೋವಲ್ಲೂ ನಲಿವಿದ್ದಂಗೆ, ಘೋರದಲಿ ಮುದ್ದು ಮಾಡಿದಂಗೆ, ಹುಡುಗಿಯಲ್ಲಿ ಒಲವು. ಬೇಸಿಗೆಯಲಿ ಚಳಿ ಆದಂಗೆ, ಕಡಲಲ್ಲಿ ಸಿಹಿ ನೀರು ಸಿಕ್ಕಂಗೆ. ನಿಸ್ಸಾರದಲಿ ಸೊಗಸು ಇದ್ದಂಗೆ, ಹುಡುಗಿಯಲ್ಲಿ ಒಲವು. ಕೊನೆಯಲ್ಲಿ ಬದುಕಿದಂಗೆ, ಮುಳುಗಿದ ಮೇಲೆ ಎದ್ದಂಗೆ, ಅರಳುವಾಗ ಹೂವ ಹರಿದಂಗೆ, ಹುಡುಗಿಯಲ್ಲಿ ಒಲವು. - ಆದರ್ಶ