• ಯುದ್ಧ ಶಾಂತಿ!

    ನೂರಾರು ಮನೆಗಳು, ನೂರಾರು ಮನಗಳು ಒಂದೊಂದು ಮನೆಯಲ್ಲೂ ಒಂದೊಂದು ರೀತಿಗಳು ನೂರಾರು ದೇಶಗಳು, ನೂರಾರು ಭಾಷೆಗಳು ಒಂದೊಂದು ದೇಶದಲ್ಲೂ ಒಂದೊಂದು ನೀತಿಗಳು; ನೂರಾರು ಮನೆ, ನೂರಾರು ಮನ ನೂರಾರು ದೇಶ, ನೂರಾರು ಭಾಷೆ ಎಲ್ಲಕ್ಕೂ ಇರುವುದು ಒಂದೇ ಭೂಮಿ! ಗೆರೆ ಎಳೆದು ಬೇರಾಗಿ ಭೂಮಿ ಒಡೆಯಬೇಕೆ? ಜೊತೆಯಾಗಿ ಹೊಡೆದಾಡಿ ದೂರಾಗಬೇಕೆ? ಯುದ್ಧದಿ ಶಾಂತಿಯ ಬಯಕೆ ಯಾಕೆ? ಸಮಾಧಿಯ ಮೇಲೆ ಹೂದೋಟ ಬೇಕೆ? – ಆದರ್ಶ


  • ಬಿಸಿಲು ಸುಡುವಾಗ

    ಎಸಿ ಅಡಿಯಲ್ಲಿ ಕುಂತವನಿಗೇನು ಗೊತ್ತು ಬಿಸಿ ಶಾಖ ಬಿಸಿ ಮುಟ್ಟದು ಮನುಜನಿಗೆ ಅಂಡು ಸುಡುವ ತನಕ, ಸುತ್ತೆಲ್ಲ ಮರಗಳು ಬೇಗೆಯಲಿ ಬಸವಳಿದಿವೆ ಆದರ್ಶಗಳೆಲ್ಲ ಮಾನವನ ಕಿಸೆಯಲ್ಲೆ ಹೊರ ಬಾರದೆ ಉಳಿದಿವೆ, ಆಡುವ ಮಾತಲ್ಲಿ ಎಲ್ಲರೂ ಧೀರರೇ, ಸರಿ ಸಮಯ ಬಂದಾಗ ಮರ ಬೆಳೆಸಲು ಯಾರಾದರು ಬಂದರೆ? ಕುಡಿಯುವ ನೀರಿಲ್ಲದಾಗ ಕಾಡುವ ಅರಿಕೆಯು ಭೀಕರ ಬದುಕುವ ಕಷ್ಟ ನೀಡದೆ ಇಂದು ಸಾವು ತೋರುತಿದೆ ಮಮಕಾರ, ಎಸಿ ಅಡಿಯಲ್ಲಿ ಕುಂತವನಿಗೇನು ಗೊತ್ತು ಬರಗಾಲದ...


  • ನಾನಾರೆಂಬುದು ನಾನಲ್ಲ

    ಅವನು ಬೆಳಿಗ್ಗೆ ಎದ್ದೇಳುವಾಗಲೇ ಎಂಟು ಗಂಟೆ ಆಗಿತ್ತು. ಹತ್ತು ಗಂಟೆಗೆ ಮೀಟಿಂಗ್ ಬೇರೆ ಇತ್ತು.ತಾನೇ ಕರೆದಿರುವ ಮೀಟಿಂಗ್ ಆದ್ದರಿಂದ ಹೋಗದೆ ಇರುವ ಹಾಗೆ ಇರಲಿಲ್ಲ. ಕಂಪನಿಗೆ ಅವನೆ ಬಾಸ್ ಬೆರೆ. ಕಾಫಿ ತಂದ ಹೆಂಡತಿಗೆ “ಬೇಗ ಎಬ್ಬಿಸೊಕೆ ಆಗಲಿಲ್ವ” ಅಂತ ರೇಗುತ್ತಾನೆ. ಪ್ರತಿ ದಿನ ತಾನಾಗೆ ಅಲಾರಂ ಇಟ್ಟುಕೊಂಡು ಎದ್ಹೆಳುತ್ತಿದ್ದವನು ಇವತ್ತು ಬೇಕು ಅಂತಲೆ ಮಲಗಿರಬಹುದು ಎಂದುಕೊಂಡು ಆಕೆ ಕೂಡ ಸುಮ್ಮನಿದ್ದಳು.ಅದನ್ನೆ ಅವನಿಗೆ ಹೇಳಲು ಭಯವಾಗಿ ಸುಮ್ಮನಾಗುತ್ತಾಳೆ. ಇವನು ಗಡಿಬಿಡಿ...


  • ಹುಟ್ಟಿದ ಊರು

    ಸಾಮಾನ್ಯವಾಗಿ ಆಗ ಎಲ್ಲರ ಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ಒಂದೊಂದು ಸೈಕಲ್ ಕೊಡಿಸಲು ಅಷ್ಟಾಗಿ ಅನುಕೂಲವಿರದ ಕಾಲವಾಗಿತ್ತು. ಆದರೂ ಮಕ್ಕಳಿಗೆ ಸೈಕಲ್ ತುಳಿವುದ ಕಲಿಸಲು ಹೆತ್ತವರು ಬಾಡಿಗೆ ಸೈಕಲ್ ಕೊಂಡು ಹೇಳಿಕೊಡುತ್ತಿದ್ದರು. ಒಂದು ಘಂಟೆಯ ಬಾಡಿಗೆ ಒಂದು ಸೈಕಲ್ ಗೆ ೪-೫ ರೂ ಇದ್ದ ಕಾಲ. ಒಂದು ಘಂಟೆಗೆ ಸೈಕಲ್ ಸಿಕ್ಕರೆ ಮಕ್ಕಳಿಗೆ ಒಂದು ಘಂಟೆಯ ಕಾಲ ಸ್ವರ್ಗಕ್ಕೆ ಕಳಿಸಿಕೊಟ್ಟರೇನೋ ಎನ್ನುವಷ್ಟು ಸಂತಸ. ಹೆಚ್ಚಾಗಿ ಅಂದವಿಲ್ಲದ ಬಾಡಿಗೆ ಸೈಕಲ್ ಗಳಲ್ಲಿ ಅನೇಕ...


  • ತಿಳಿ ನೀಲಿ ಆಗಸ

    ಎಲ್ಲರೂ ಇದ್ದು ಒಂಟಿಯಾಗುವ ಚಂದಕೆ ಬಂಧಗಳನು ಬೆಳೆಸಬೇಕೆ ನನ್ನೊಡನೇಯೆ ಬಾಳುವ ನನಗೆ ಈಗ ಒಂಟಿಯಾಗುವ ಬಯಕೆ, ತಿಳಿನೀಲಿ ಆಗಸದಿ ಹಾರುವ ಒಂಟಿ ಹಕ್ಕಿಯಂತೆ ಈಗ ನಾನು ನನ್ನೆತ್ತರಕೆ ತಾನು ಹಾರಲಾಗದೆಂದು ಸುಮ್ಮನೆ ತೇಲಾಡುತಿದೆ ಬಾನು, ಕೈ ಚಾಚಿ ನಿಂತ ಜನರಿಗೆ ನಾನು ಸಿಗಲಾರದ ದಿಗಂತ ನನ್ನನೇ ದೂಡುತ ಸೇರಿರುವೇ ಈಗ ಯಾರಿಗೂ ಸಿಗದ ಹಂತ, ತಿಳಿನೀಲಿ ಆಗಸದಿ ಹಾರುತಿರುವ ಹಕ್ಕಿ ಈಗ ನಾನು ಯಾರ ಕೈಗೂ ಸಿಗದಂತೆ ಹಾರಾಡುವೆನು! –...