ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಯಾವುದು?
ಅನ್ನ ನೀಡುವ ಕೈ ಯಾವುದೊ? ನನಗೆ ಪ್ರೀತಿ ನೀಡುವ ಮನಸ್ಸಾವುದೊ? ಅನ್ನ ಪ್ರೀತಿ ಎರಡೂ ಸಿಗುವ ಆ ಸುಂದರ ಸೊಬಗ ಬದುಕಾವುದೊ? ಏರು ಯಾವುದೊ, ಇಳಿಜಾರು ಯಾವುದೊ, ಕಣಿವೆಯ ನಡುವಲಿ ನಡೆವಾಗ ನೆರಳಂತೆ ನಡೆವ ಆ ಧೀರತನದ ಮನಸ್ಸಾವುದೊ? ಸುಳ್ಳಾವುದೊ ನನ್ನ ನಿಜಯಾವುದೊ, ನನ್ನ ನಿಜದ ಸುಳ್ಳಿನೊಡನೆ ಉಳಿಯುವ ಆ ನನ್ನ ಕನಸಾವುದೊ? ಮೂಡಣ ಯಾವುದೊ, ಬಡಗ ಯಾವುದೊ, ದಿಕ್ಕು ಮರೆತು ಅಲೆವಾಗ ಜೊತೆಗಿರುವ ಆ ಮೂರ್ತ ಚುಕ್ಕಿಯಾವುದು? ಕಿರಿ...
-
ಸಂತೆ ನಡುವೆ
ಸಂತೆಯ ನಡುವಿದೆ ನನ್ನ ಮನೆ, ಸದ್ದು ಮಾಡದಿರುವುದೆ ಜಗವು ಎಲ್ಲವ ಬಿಟ್ಟು ಸುಮ್ಮನೆ. ಸುತ್ತ ಜನರು ಸುಳಿವರು, ಕೇಕೆ ಹಾಕಿ ಕುಣಿವರು, ಧ್ಯಾನಕ್ಕೆಂದು ನಾ ಕೂರಲು, ಶಪಥಗೈವರು ಸುತ್ತ ಎಲ್ಲರು, ಆಗಸವನೇ ಧರಗೆಳಿಸಲು. ಅಲ್ಲೊಬ್ಬನ ಅಳು, ಇಲ್ಲೊಬ್ಬಳ ನಗು, ಹುಚ್ಚೆದ್ದು ಓಡುವುದು ಯಾರದ್ದೋ ಮಗು, ಇಲ್ಲೊಂದು ನಾಯಿ, ಅಲ್ಲೊಂದು ದನ ಇವೆಡರ ನಡುವೆ ಘೋರ ಕದನ. ಸಂತೆಯ ನಡುವಿದೆ ನನ್ನ ಮನೆ, ಸದ್ದು ಮಾಡದೆ ಇರುವರೆ ಎಲ್ಲರಿಲ್ಲಿ ಸುಮ್ಮನೆ. ಮೋಡದಲು...
-
ಹೋಗ್ಲಿ ಬಿಡು
ಗೊತ್ತಿರದವರಿಗೆ ಗೌರವ ಕೊಡು, ಗೊತ್ತಿರುವವರಿಗೆ ಒಲವ ಕೊಡು, ಬರುವವರಿಗೆ ನಿನ್ನೊಳ್ಳೆ ಮನಸ್ಸೇ ಗೂಡು, ಬಂದು ಹೋಗುವವರು ಸುಮ್ಮನೆ ಹೋಗ್ಲಿ ಬಿಡು. ಎತ್ತ ಬಿದ್ದರೂ ಎದ್ದು ಬಿಡು, ಏಳದಿದ್ದರೂ ಉರುಳಿ ನಲಿದಾಡು, ಸರಳ ಜೀವನದ ಸುತ್ತ ದಟ್ಟ ಕಾಡು, ಅತ್ತಿತ್ತ ನೋಡದೆ ಜೀವನವು ನೆಟ್ಟಗೆ ಹೋಗ್ಲಿ ಬಿಡು. ಜೀವನವಿಹುದು ಆದಿ ಅಂತ್ಯದ ನಡುವೆ, ನೆಮ್ಮದಿಯೊಂದೆ ಎಂದಿಗೂ ಅದರ ಒಡವೆ, ಅಗಾಧ ಆಗಸಕೆ ಮನವನ್ನ ತೆರೆದಿಡು, ಯೋಚನೆಗಳು ದಿಗಂತದೆಡೆಗೆ ಹಾರಿ ಹೋಗ್ಲಿ ಬಿಡು....
-
ದೂರದಿಂದ
ದೂರದಿಂದ ಚಂದ, ನನ್ನ ನಿನ್ನ ಬಂಧ, ಸಮಯ ನಿಂತು ಬಿಡಲಿ ಇಲ್ಲಿಯೇ, ಹತ್ತಿರ ಬರದಂತೆ ನಮ್ಮಿಬ್ಬರ ಛಾಯೆ. ದೂರದ ಬೆಟ್ಟವೂ ನುಣ್ಣಗೆ ಕಣೆ, ಹತ್ತಿರ ಹೋದಾಗಲೆ ಅದರ ಸ್ವರೂಪ ಬಯಲು, ಮದುವೆ ಬಂಧವೂಂದು ದೊಡ್ಡ ಹೊಣೆ, ಅನುಭವಿಸುವಾಗಲೇ ಇಳಿವುದು ಅದರ ಅಮಲು. ಮೊದಮೊದಲಿಗೆ ಎಲ್ಲರೂ ಒಳ್ಳೆಯವರೇ ನಂತರ ತಿಳಿಯಿತಲ್ಲವ ಎಲ್ಲರ ಆಟ, ಆದರೂ ಒಟ್ಟಿಗಿರುವ ಬಯಕೆ ಯಾಕೆ, ಒಳ್ಳೆಯದಲ್ಲ ಜೊತೆಗಿರುವ ಜನರ ಕೂಟ. ದೂರದಿಂದ ಬೆಂಕಿಯೂ ಚಂದ ಹತ್ತಿರ ಹೋದಾಗಲೇ...
-
ಮಳೆಗಾಲದ ಆರಂಭ
ಮಳೆಗಾಲದ ಆರಂಭಕ್ಕೆ ಬೆಟ್ಟವು ಬೆಳೆದು ಆಗಸವ ನೋಡ್ತಿತ್ತು, ಮಳೆ ಹನಿಗಳ ಬರಮಾಡಿಕೊಳ್ಳಲು ತಾ ಮುಗಿಲಿಗೆ ನೀಡಿತ್ತು ಮುತ್ತು. ತಣ್ಣನೆಯ ಗಾಳಿ ತೆಂಕಣದಿಂದ ಬಂದಿತ್ತು, ಸುಯ್ಯನೆ ಸುತ್ತಿ ಬೆಟ್ಟವನೆ ಹತ್ತಿ ಹೇಳಿತ್ತು, ಇನ್ಮುಂದೆ ಮಳೆಯು ಬೆಟ್ಟದ ಸ್ವತ್ತು. ಮಣ್ಣ ಗಂಧ ಹೊರಬರುವೆನೆಂದು ಕೈ ಬೀಸಿ ಹೇಳಿತ್ತು, ಮಳೆಯ ಆಗಮನವ ಅರಿತ ಭೂಮಿಯ ಕಣ್ಣೂ ತುಂಬಿತ್ತು, ಮಳೆಗಾಲದ ಆರಂಭಕ್ಕೆ ಈಗ ಕಾಡೆಲ್ಲ ಹಸಿರು, ಕಳೆದ ಯುಗಾದಿಯಿಂದ ಕಾದು ಕುಳಿತಿವೆ ಹೊಚ್ಚ ಹೊಸ ಚಿಗುರು....