• ಕನ್ನಡ ಜನ

    ಇತ್ತೀಚಿನ ದಿನಗಳಲ್ಲಿ ಕನ್ನಡ ಉಳಿಸಿ ಬೆಳೆಸಿ ಎಂಬ ಕೂಗು ಹೆಚ್ಚಾಗುತ್ತಿದೆ. ಜೊತೆಗೆ ಕರ್ನಾಟಕಕ್ಕೆ ಪ್ರತಿ ಬಾರಿ ಕೇಂದ್ರ ಸರಕಾರದಿಂದ ಅನ್ಯಾಯವಾಗುತ್ತಿದೆ ಎಂಬ ವಿಷಯ ಸಹ ನಮ್ಮನ್ನು ಇನ್ನೊಂದು ರೀತಿ ಬೇಸರ ಪಡಿಸುತ್ತಿರುತ್ತದೆ. ಇದಕ್ಕೆ ಅನೇಕ ಕಾರಣಗಳು ಅಂಶಗಳು ಕನ್ನಡಿಗರ ಹಿನ್ನೆಡೆಗೆ ಕಾರಣವಾಗಿರಬಹುದು. ಇವುಗಳ ಜೋತೆಗೆ ಇತಿಹಾಸ ಸಹ ನಮ್ಮ ಇಂದಿನ ಈ ಸ್ಥಿತಿಗೆ ಬಹುಮುಖ್ಯ ಕಾರಣ ಎನ್ನುವುದ ನಾವು ಮರೆಯುತ್ತಿದ್ದೇವೆ. ಇತಿಹಾಸದಲ್ಲಿ ನಡೆದ ಘಟನೆ ಪ್ರಭಾವಗಳ ಮೀರಿ ನಿಲ್ಲಲು ಕನ್ನಡಿಗರು...


  • ನಾವು ಪ್ರಾಕ್ಟಿಕಲ್ ಆಗಬೇಕು

    ಒಂದೆರಡು ವರ್ಷದ ಹಿಂದೆ ಪ್ರಜಾವಾಣಿಯಲ್ಲಿ ಎಸ್. ಎಲ್. ಭೈರಪ್ಪನವರು ಒಂದು ಮಾತು ಹೇಳಿದ್ದರು. “ನಾವು ಜೀವನದಲ್ಲಿ ಆದರ್ಶಗಳನ್ನು ಇಟ್ಟುಕೊಂಡು ಬದುಕುವುದಕ್ಕೆ ಈ ಕಾಲದಲ್ಲಿ ಸಾಧ್ಯವಿಲ್ಲ” ಎಂದು. ಅದು ನಿಜ ಕೂಡ. ನಮ್ಮ ಆದರ್ಶಗಳನ್ನು, ಒಳ್ಳೆಯತನವನ್ನು ಜನ ನಮ್ಮ ದಡ್ಡತನ ಎಂದು ತಿಳಿದುಕೊಳ್ಳುತ್ತಾರೆ. ಅದನ್ನು ಅವರು ತಮ್ಮ ವ್ಯವಹಾರಕ್ಕೆ ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ. ನಾವು ಮಾತ್ರ ಇದ್ದಂತೆ ಇರುತ್ತೇವೆ. ಅಕ್ಷರಶಃ ಅವರು ನಮ್ಮ ವ್ಯಕ್ತಿತ್ವವನ್ನು ಕೊಂದಿರುತ್ತಾರೆ. ಮನುಷ್ಯನನ್ನು ಸಾಯಿಸುವುದಕ್ಕು, ಮನುಷ್ಯತ್ವವನ್ನು ಸಾಯಿಸುವುದಕ್ಕೂ...


  • ವಿಶ್ವಮಾನವನ ಸಂದೇಶ

    ಅಣ್ಣನ ನೆನಪು ಪುಸ್ತಕ ಕೊಂಡುಕೊಳ್ಳುವಾಗ ಇದರಲ್ಲಿ ಬಹುಶಃ ಕುವೆಂಪುರವರ ಕವಿತೆ, ಕಾದಂಬರಿ, ನಾಟಕಗಳ ವಿಷಯವೇ ಪೂರ್ತಿ ಇರಬಹುದೇನೋ? ಅಥವಾ ತೇಜಸ್ವಿಯವರ ಬಾಲ್ಯದ ಬಗ್ಗೆ, ಅವರು ನಡೆದು ಬಂದ ದಾರಿ ಬಗ್ಗೆ ಈ ವಿಷಯಗಳೇ ತುಂಬಿರಬಹುದು ಎಂದು ಆಲೋಚಿಸಿದ್ದೆ. ಪುಸ್ತಕ ಓದುವುದಕ್ಕೆ ಶುರುಮಾಡಿದ ನಂತರ ಒಂದೊಂದೇ ವಿಷಯಗಳು, ಕುವೆಂಪು ಅವರ ವಿಭಿನ್ನ ವಕ್ತಿತ್ವ ಅನಾವರಣಗೊಳ್ಳುತ್ತಾ ಹೋದವು. ತೇಜಸ್ವಿಯವರ ಬಾಲ್ಯದ ಕುಚೇಷ್ಟೆಗಳು, ಮೈಸೂರಿನ ಆ ಕಾಲದ ಚಿತ್ರಣ, ಅವರ ಫೋಟೋಗ್ರಫಿಯ ಪಾಂಡಿತ್ಯ, ಸಂಗೀತಭ್ಯಾಸದ...


  • ಚರಿತ್ರೆ

    ಇತಿಹಾಸ ಹೇಳುವ ಸತ್ಯವಾದರೂ ಏನು? ಇತಿಹಾಸ ಬರೆದ ಸತ್ಯವಂತನು ಯಾರು? ಸುಳ್ಳನ್ನು ಸತ್ಯವೆಂದು ಹೇಳುವ ಚರಿತೆಯ ಸುಳ್ಳೆಂದು ಪ್ರಮಾಣಿಸಿ ಹೇಳುವರಾರು? ಸತ್ಯವ ಹುದುಗಿಟ್ಟು, ಸುಳ್ಳನ್ನು ಸ್ವರ ಮಾಡಿ ಹಾಡುವ ಚರಿತೆಯ ರಾಗದಿ ತಪ್ಪು ಹುಡುಕುವವರು ಯಾರು? ಸುಳ್ಳಾದ ಸುಳ್ಳನ್ನು, ಸತ್ಯವಾದ ಸತ್ಯವನ್ನು, ಬೆರೆಸಿ ಕಿರುಚಾಡಿ ಹೇಳುವುದು ಚರಿತೆ,ಮರೆಮಾಚಿದ ಸತ್ಯವನ್ನು ಸುಳ್ಳಿಂದ ಹೊರತೆಗೆದು ಬೆತ್ತಲೆ ಸತ್ಯವ ನೋಡಲಾದೀತೇ?ಹೂವಿನ ನಡುವಲ್ಲಿ ಮುಳ್ಳೊಂದು ಬೆರೆತಂತೆ, ಕಣಿವೆಯಲಿ ಅಪರಿಚಿತ ಮಾರ್ದನಿಯು ಕೇಳುವಂತೆ, ಕತ್ತಲೆಯ ಆಗಸದಲಿ ತಾರೆಗಳು...


  • ನಾನು ನನ್ನ ಕನಸು

    ನನ್ನ ಮಗು, ಹುಟ್ಟಿದ್ದು ನನ್ನಾಕೆ ಹುಟ್ಟಿದ ದಿನವೇ. ಎಷ್ಟು ಭಯ ಇತ್ತು ಎದೆಯಲ್ಲಿ ನನ್ನಾಕೆಯ ಬಗೆಗೆ, ಮುದ್ದಿನ ಹೆಂಡತಿ. ಆ ಹೊಟ್ಟೆಯ ಭಾರ ಹೊತ್ತು ತಿರುಗಾಡಲು ಕಷ್ಟ ಪಡುತಿದ್ದಳು ಆಕೆ. ಸಾಧಾರಣ ಪ್ರಸವ ಬೇಡ ಅನ್ನೋದು ನನ್ನ ಕಾಳಜಿಯ ಅಭಿಪ್ರಾಯವಾದ್ರೆ, ಅವಳದ್ದು ಅದೇ ಬೇಕು ಅನ್ನೋ ಮಹಾದಾಸೆಯ ವಾದ. ಕೊನೆಗೂ ಗೆದ್ದದ್ದು ಅವಳೆ. ಆಸ್ಪತ್ರೆಯಲ್ಲಿ ಕಳೆದ ಆ ಕ್ಷಣಗಳು, ಅವಳು ಕಿರುಚೋದನ್ನ ಕೇಳಿ ಆಗುತಿದ್ದ ಚಡಪಡಿಕೆ ವ್ಯಕ್ತ ಪಡಿಸೋಕೆ ಮಾತು...