ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ತೀರ
ಮಾತೇ ಬಾರದೆ ನುಡಿಮುತ್ತು ಸುರಿವಾಗ, ಕಥೆಯೇ ಇರದೇ ಸ್ವಾರಸ್ಯ ಸಿಗುವಾಗ, ಅರಿವು ಇರದೇ ಪ್ರೀತಿ ಇರುವಾಗ, ನಾನೊಂದು ತೀರ, ನೀನೊಂದು ತೀರ! ಕಲ್ಪನೆ ಇರದೇ ಕನಸೊಂದು ಕಂಡಾಗ, ಕಾರಣ ಇರದೇ ಭಾವುಕಳಾದಾಗ, ನನ್ನನ್ನೇ ಮರೆತು ನಿನ್ನನ್ನು ನೆನೆದಾಗ, ನಾನೊಂದು ತೀರ, ನೀನೊಂದು ತೀರ! ನಿನ್ನ ನೆನಪಾಗಿ ನಾನು ಕಣ್ಣೀರು ಇಡುವಾಗ, ನನ್ನ ನೆನಪೇ ಇರದೇ ನೀನಿಂದು ಇರುವಾಗ, ನಿನ್ನ ದಾರಿ ಕಾಣುತ ನಾ ಕಲ್ಲಂತೆ ನಿಂತಾಗ, ನಾನೊಂದು ತೀರ, ನೀನೊಂದು...
-
ಮರಳಿ ಮಣ್ಣಿಗೆ
ಮರಳಿ ಮಣ್ಣಿನೆಡೆಗೆ ಪಯಣವು ಸಾಗಿದೆ, ಬದುಕಿನ ಎಲ್ಲ ಹಂತಗಳನ್ನು ದಾಟುತ. ಮರಳಿ ಮಣ್ಣಿನೆಡೆಗೆ ಪಯಣವು ಸಾಗುತಿದೆ ಬದುಕೇ ಅಂಬೆಗಾಲಿಡುತ! ಮಣ್ಣಿಂದಲೇ ಜನನ, ಮಣ್ಣಿಂದಲೇ ಎಲ್ಲ ಜೀವಗಳ ಚಲನ. ಮಣ್ಣಿಂದಲೇ ಈ ಲೋಕದ ಎಲ್ಲ ಜೀವಿಗಳಲಿ ಚಿಮ್ಮುತಿದೆ ಜೀವನ. ಮರಳಿ ಮಣ್ಣಿಗೆ ಪಯಣ ಸಾಗಿದೆ ಎಲ್ಲ ಬಂಧಗಳ ತೊರೆದು, ಮರಳಿ ಮಣ್ಣಿಗೆ ಪಯಣ ಸಾಗಿದೆ ಎಲ್ಲ ಋಣಗಳು ಮುಗಿದು...! - ಆದರ್ಶ
-
ಆ ನಗು
ಆ ನಗು, ಅದೇ ನಗು, ಅದಕ್ಕೆ ಯಾವಾಗಲೂ ಅದೇ ಸಾಟಿ, ಎಲ್ಲೇ ಹೋದರೂ, ಯಾರನ್ನೇ ಕಂಡರು, ಹಿಂದೆಂದೂ ಕಂಡಿರಲಿಲ್ಲ ಇಂಥಾದ್ದೊಂದು ಧಾಟಿ. ಅರಳಿದ ಕಣ್ಣಿಗೆ ಕನ್ನಡಿ ಅದು, ಅವಳ ಮನದ ಮುನ್ನುಡಿ, ಯಾವ ಭಾಷೆಯ ಯಾವ ಪದವು ವಿವರಿಸಲಾರದು ಅವಳ ನಗುವ ನುಡಿ. ಆ ನಗು, ಅದೇ ನಗು, ಅದಕ್ಕೆ ಯಾವಾಗಲೂ ಅದೇ ಸಾಟಿ, ಎಲ್ಲೂ ಕಾಣದ, ಎಂದೂ ಕೇಳದ ಅವಳ ನಗುವು ಬಹಳ ಚೂಟಿ. ಸ್ಪಟಿಕದ ಹೊಳಪು, ಮರಳ...
-
ಬಲಿ
ನನ್ನ ಸ್ವಾರ್ಥಕ್ಕೆ ಅವಳ ಬಲಿ ಪಡೆದು ಅವಳ ಜೊತೆಗೆ ಹೇಗೆ ಇರಲಿ! ಆದರೂ ಅವಳು ನನ್ನ ಮಡದಿ, ಅವಳ ಬಲಿಯ ಮೇಲೆ ನಡೆವ ಜೀವನ ತರುವುದೇ ಮನಕೆ ನೆಮ್ಮದಿ? ನನ್ನ ಸ್ವಾರ್ಥಕ್ಕೆ ಅವಳ ಬಲಿ, ಪಡೆದು ಅವಳ ಜೊತೆಗೆ ಹೇಗೆ ಇರಲಿ! ತೇಲೋ ಮೇಘ ಅವಳು, ತಿರುಗೋ ಭೂಮಿ ನಾನು, ಹೇಗೆ ತಾನೆ ಆಗುವುದು ಮಿಲನ? ಉರಿಯ ಬೆಂಕಿ ನಾನು, ತಣಿಸೋ ನೀರು ಅವಳು, ನಡೆಯದಿರದೆ ನಮ್ಮ ನಡುವೆ ಸಣ್ಣದೊಂದು...
-
ವೈರಿ
ಮನಸ್ಸಿನ ನೂರು ಕಾರ್ಯವೈಖರಿ ಎಲ್ಲಕ್ಕೂ ನಮ್ಮ ಹೃದಯವೇ ವೈರಿ ಹೋದರೆ ಮನಸ್ಸು ನಮ್ಮ ಹಿಡಿತವ ಮೀರಿ, ಆಗುವವು ನಮಗೆ ನಮ್ಮ ಭಾವನೆಗಳೇ ವೈರಿ. ಉದರದಲ್ಲೀಗ ನಿಲ್ಲದ ಯೋಚನಾ ಲಹರಿ, ಭಾವನೆಗಳೇ ನಡೆಸಿವೆ ಈಗ ಮಹಾಯುದ್ಧದ ತಯಾರಿ. ಮಾಡುವ ಕೆಲಸಕ್ಕೆ ಅಡೆತಡೆ ಸಾವಿರ, ಮಾಡುವ ಮೊದಲು ಯೋಚನೆಗಳ ಅಬ್ಬರ. ಹಿಡಿತವೇ ಇಲ್ಲದ ಮನದಲ್ಲಿ ನಮ್ಮ ಯೋಚನೆಗಳೇ ನಮಗೆ ಪ್ರಹರಿ, ಎಲ್ಲವೂ ನಮ್ಮ ಭಾವನೆಗಳ ಕಾರ್ಯವೈಖರಿ! ಮನಸ್ಸಿಗೆ ಎಂದಿಗೂ ನೂರಾರು ದಾರಿ, ಎಲ್ಲಕ್ಕೂ...