• ನಾ ಅರಿಯದ ನೋವು

    ಮರವೊಂದು ಬಳ್ಳಿಯಿಂದ ಬೇರಾಗಬಂದಾಗ ಬಳ್ಳಿಯು ದೂರ ಸರಿದು ಮತ್ತೆಲ್ಲೋ ನಿಲ್ಲಬೇಕಾಗ, ಮರದ ಮನದಲ್ಲಿ, ಬಳ್ಳಿಯ ಒಡಲಲ್ಲಿ ಮೂಡಿಬಂದದ್ದು ನಾ; ಅರಿಯದಂಥ ನೋವು! ಮರಿಯೊಂದು ಗೂಡನ್ನು ತೊರೆದು ಬರುವಾಗ ತಾಯಿಯು ಕಂಬನಿ ಸುರಿಸಿ ನೋಡುತಿರುವಾಗ ಮರಿಯ ಭಯದಲ್ಲಿ, ತಾಯಿಯ ಕರುಳಲ್ಲಿ ಬೆರೆತುಬಂದದ್ದು ನಾ; ಅರಿಯದಂಥ ನೋವು! ಬೆಳೆದು ಬಂದ ಹಾದಿಯ ಜಾಡನ್ನು ತಾನೇ ಅಳಿಸಿ ಕಾಣದ ಹೊಸ ಹಾದಿಯ ಸೊಗಸನ್ನು ಅರಸಿ ನಡೆದಿದ್ದ ಹಾದಿಯ ನೆನಪಲ್ಲಿ, ಕಾಣದಂಥ ಹಾದಿಯ ಮೆರುಗಲ್ಲಿ; ಇರುವುದು...


  • ಗೋಧೂಳಿ

    ಪ್ರಕೃತಿಯಲ್ಲಿ ಯಾವಾಗಲೂ ಶಕ್ತಿಯಿದ್ದವರದ್ದೇ ಮೇಲುಗೈ ಹಾಗೂ ಬದುಕಿ ಜೀವನ ಮುಂದುವರಿಸುವ ಅರ್ಹತೆ ಅಂತಾಗುತ್ತದೆ. ಎಣಿಸಲಾಗದ ಅದೆಷ್ಟೋ ಯುಗಗಳು ಹೀಗೆ ಕಳೆದಿವೆ. ಆದರೆ ಕಾಲಾಂತರದಲ್ಲಿ ಮನುಷ್ಯತ್ವದ ಜನನವಾದ ನಂತರ ಈ ಪ್ರಕೃತಿಯ ನಿಯಮದಲ್ಲಿ ಸ್ವಲ್ಪ ಬದಲಾವಣೆ ಬಂದಂತಿದೆ. ಮನುಷ್ಯನು ಇತರ ಪ್ರಾಣಿ, ಪಕ್ಷಿ, ಕೀಟಗಳಿಗಿಂತ ಶ್ಯಕ್ತನಲ್ಲವಾದರೂ ಇತರೆ ಪ್ರಾಣಿಗಳು ಅಳಿದರೂ ಮಾನವನು ಬದುಕುತ್ತಾ ಇರುವನು. ಈಗ ಮನುಷ್ಯನ ಯೋಚನಾ ಶಕ್ತಿಯೇ ಅವನ ದೈಹಿಕ ಶಕ್ತಿಯಾಗಿದೆ. ಪ್ರಕೃತಿಯಲ್ಲಿ ಬದುಕೋದ ಕಲಿಯುತ್ತಿರುವಾಗ ಇತರ ಪ್ರಾಣಿಗಳ...


  • ಪ್ರವರ

    ಅಂತ್ಯದಲ್ಲಿ ನಡುಗುವುದು ಯುಗಗಳಿಂದ ನಿಂತಿದ್ದ ಗೋಪುರ, ಅದರಡಿಯಲ್ಲಿ ಕಳೆದು ಹೋಗುವುದು ನಮ್ಮಯ ಪ್ರವರ; ಸಮಯದ ಸ್ಪರ್ಶಕೆ ಮಾಸದೆ ಉಳಿವುದೇ ಬಣ್ಣವು, ಅದೆಷ್ಟು ವರುಷ ತಡೆದು ನಿಲ್ಲುವುದು ಯುದ್ಧ ನಿರತ ಮನವು? ಎಂದಾದರೂ ಚಿಗುರಲೇಬೇಕು ಶಾಂತಿಯಿಂದ ಹೂವು, ಅದರ ಕಂಪಲ್ಲೇ ಮರೆಯಾಗಬೇಕು ಯುದ್ಧ ತಂದ ಸಾವು. ಅಂತ್ಯದಲ್ಲಿ ನಡುಗುವುದು ಯುಗಗಳಿಂದ ನಿಂತಿದ್ದ ಗೋಪುರ, ಅದರಡಿಯಿಂದಲೇ ಏಳುವುದು ನಮ್ಮ ನವಯುಗದ ಪ್ರವರ! -ಆದರ್ಶ


  • ನಾವು ನಾವೇನೆ

    ಈ ಕಥೆ ನಾನು ತಿಳಿದಿರುವ, ಕೇಳಿರುವ ಮಟ್ಟಿಗೆ ಹೇಳುತ್ತೇನೆ. ಪಾಂಡವರು ಮಾಯಾಸಭವೆಂಬ ವಿಶೇಷವಾದ ಅರಮನೆಯ ಕಟ್ಟಿಸಿರುತ್ತಾರೆ. ಅದೊಂದು ಮಾಯಾಜಾಲದ ಮನೆ. ನೀವು ಗೋಡೆ ಇದೆ ಅಂತ ಮುಟ್ಟಿದರೆ ಅಲ್ಲಿ ಗೋಡೆ ಇರೋದಿಲ್ಲ. ಗೋಡೆ ಇಲ್ಲ ಅಂತ ಮುಂದೆ ಹೋದರೆ ಅಲ್ಲಿ ಗೋಡೆ ಇರುತ್ತದೆ. ಯಾವುದು ಇಲ್ಲವೋ ಅದು ಇದ್ದಂತೆ, ಇರುವುದು ಇಲ್ಲದಂತೆ ಕಾಣುತ್ತದೆ. ಇಂಥಹ ಮನೆಯ ಗೃಹಪ್ರವೇಶಕ್ಕೆ ದುರ್ಯೋಧನ ಬರುತ್ತಾನೆ. ಇದು ಅವರ ಜಗಳಕ್ಕೆ ಮೊದಲೇ ಆಗಿದ್ದು ಅನ್ನಿಸುತ್ತೆ. ಅವನು...


  • ನೆನಪಿನಂಗಳದಿಂದ

    ನಮ್ಮ ಚಿಣ್ಣರ ಕನಸು ತಂಡ ನಮಗೆ ಒಂದು ವಿಳಾಸ ಕೊಟ್ಟು ಈ ಭಾನುವಾರ ಕುಂದಲಹಳ್ಳಿಯ ಹತ್ರ ‘ಬಾರ್ನ್ ಟು ಹೆಲ್ಪ್’ ತಂಡ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗೋದಕ್ಕೆ ಸೂಚಿಸಿತು. ನಾನು ಹಾಗು ಪೂಜಾ ನಮಗೆ ಹತ್ರ ಇದೆ ಅಂತ ಹೋಗೋ ಮನಸ್ಸು ಮಾಡಿ ವಿಳಾಸ ಹುಡುಕಿ ಹೊರಟೆವು. ಕುಂದಲಹಳ್ಳಿ ಗೇಟಿನಿಂದ ವಿಬ್ಗಾಯಾರ್ ಶಾಲೆಯ ಮಾರ್ಗವಾಗಿ ಹೋಗಿ ಆ ತಂಡದ ಸದಸ್ಯರಿಗೆ ಫೋನ್ ಮಾಡಿ ನಮಗೆ ಬೇಕಿರೋ ಜಾಗ ಹುಡುಕೋಕೆ ಒಂದು ಘಂಟೆಗಿಂತ...