• ನೆನಪಿನಂಗಳದಿಂದ

    ನಮ್ಮ ಚಿಣ್ಣರ ಕನಸು ತಂಡ ನಮಗೆ ಒಂದು ವಿಳಾಸ ಕೊಟ್ಟು ಈ ಭಾನುವಾರ ಕುಂದಲಹಳ್ಳಿಯ ಹತ್ರ ‘ಬಾರ್ನ್ ಟು ಹೆಲ್ಪ್’ ತಂಡ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗೋದಕ್ಕೆ ಸೂಚಿಸಿತು. ನಾನು ಹಾಗು ಪೂಜಾ ನಮಗೆ ಹತ್ರ ಇದೆ ಅಂತ ಹೋಗೋ ಮನಸ್ಸು ಮಾಡಿ ವಿಳಾಸ ಹುಡುಕಿ ಹೊರಟೆವು. ಕುಂದಲಹಳ್ಳಿ ಗೇಟಿನಿಂದ ವಿಬ್ಗಾಯಾರ್ ಶಾಲೆಯ ಮಾರ್ಗವಾಗಿ ಹೋಗಿ ಆ ತಂಡದ ಸದಸ್ಯರಿಗೆ ಫೋನ್ ಮಾಡಿ ನಮಗೆ ಬೇಕಿರೋ ಜಾಗ ಹುಡುಕೋಕೆ ಒಂದು ಘಂಟೆಗಿಂತ...


  • ಬಸ್ಸು, ಹುಡುಗ, ಒಂದು ಪಯಣ!

    ನಮ್ಮ ಹಳ್ಳಿಗಳ ಕಡೆ ಹೆಚ್ಚಾಗಿ ಸಾಹುಕಾರಿ ಬಸ್ಗಳು ಓಡಾಡುವುದರಿಂದ ಅವುಗಳ ನಡುವೆ ಸದಾ ಉತ್ತಮ ಸ್ಪರ್ಧೆ ಇರುತ್ತದೆ. ಡ್ರೈವರ್, ಕಂಡಕ್ಟರ್ ಎಲ್ಲರಲ್ಲೂ ಸದಾ ಪೈಪೋಟಿ ನಡೆದೇ ಇರುತ್ತದೆ. ಇದರಿಂದ ಜನರಿಗೂ ಒಂದು ಬಗೆಯ ಲಾಭವೇ ಆಗುತ್ತದೆ. ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರಬೇಕಾದ ಊರಿಗೆ ಬರುತ್ತವೆ. ಜೊತೆಗೆ ಬಸ್ಸುಗಳಲ್ಲಿ ಜನರನ್ನು ಓಲೈಸಲು ಒಳ್ಳೊಳ್ಳೆ ಹಾಡುಗಳು, ಚಿತ್ರಗಳನ್ನು ಸಹ ಹಾಕಿರುತ್ತಾರೆ. ಇವರ ಪೈಪೋಟಿಯದ್ದೇ ಒಂದು ಸಣ್ಣ ಚರ್ಚೆ ನಮ್ಮ ಹಳ್ಳಿ ಹುಡುಗರಲ್ಲಿ ಆಗಾಗ...


  • ಪ್ರೀತಿ ಗೀತಿ ಇತ್ಯಾದಿ

    “ಅಷ್ಟಕ್ಕೂ ನನ್ನನ್ನು ಮದುವೆ ಆಗಲು ನಿನಗೆ ಇರುವ ಯೋಗ್ಯತೆ ಆದರೂ ಏನು? ನಿನ್ನ ಮದುವೆ ಆದರೆ ನಾಳೆ ಮನೆಯ ಬಾಡಿಗೆ, ಹಾಲು, ದಿನಸಿಗಳಿಗೆ ತಲೆ ಕೆಡಿಸಿಕೊಳ್ಳಬೇಕು. ತಿಂಗಳ ಕೊನೆಯಲ್ಲಿ ಖಾಲಿ ಕೈಯಲ್ಲಿ ಜೀವನ ಮಾಡಿಸುತ್ತೀಯ. ಒಳ್ಳೆಯ ಬಟ್ಟೆ ತೆಗೆದುಕೊಳ್ಳುವುದು ಇರಲಿ, ತಿನ್ನುವುದಕ್ಕೂ ಲೆಕ್ಕಾಚಾರ ಹಾಕುತ್ತಿಯ. ಇನ್ನು ಮಕ್ಕಳಾದರೆ ಅವರಿಗೆ ಒಳ್ಳೆ ಬಟ್ಟೆ, ಶಿಕ್ಷಣ ಕೊಡಿಸುವುದಂತು ದೂರದ ಮಾತು. ಹೇಳು, ಯಾವ ನಂಬಿಕೆ ಇಟ್ಟಕೊಂಡು ನಿನ್ನ ಜೊತೆ ಬರಬೇಕು ನಾನು?”. ಎಂದು...


  • ಮಂದಹಾಸ

    ಅಲಂಕೃತ ಬಳಿ ಬಂದು ಎದೆ ತಾಕಿ ನಿಲ್ಲು ಇಲ್ಲದಂತೆ ಯಾವುದೇ ಅಂತರ ಭಾವನೆಗಳಲಿ ಬೆರೆತ ನೀನು ನನ್ನ ನೆನಪುಗಳಿಲಿ ಇರುವೆ ನಿರಂತರ, ಜೊತೆಯಾಗಿ ನಾವು ಸಾಗುತಿರೆ ದೂರದ ಆ ಗುರಿಯೂ ಈಗ ಹತ್ತಿರವಾಗಿದೆ ನಿನ್ನ ಗುಣದಿಂದ ಅಲಂಕೃತವಾದ ನನ್ನ ಬದುಕಿನ ಧ್ಯೇಯವೀಗ ಬಹಳ ಎತ್ತರವಾಗಿದೆ ಮಂದಹಾಸ ಇರುಳ ಬೆಳಕಲ್ಲಿ ತಂಪೆರಸುವ ಚೆಲುವು ಚಂದ್ರನಿಗೇ ಸಾಟಿ ಅವಳ ಸುಂದರ ಮೊಗವು, ಮಳೆಯಲ್ಲಿ ಮಿಂದು ಬೀಗುವ ಅರಳಿದ ಹೂವಂಥ ಮೊಗವು, ಸದಾಕಾಲ ಜೊತೆಗೆ...


  • ಜೀವನದಿ

    ಯುಗಗಳ ಹಿಂದೆ ಬೆಂಕಿ ಉಂಡೆಯಂಥಹ ಭೂಮಿಯೂ ತನ್ನ ಮೇಲ್ಮೈ ಬೆಂಕಿಯೆಲ್ಲ ಉರಿದ ನಂತರ ಸಾವಿರಾರು ವರ್ಷಗಳ ಕಾಲ ಮಳೆ ರೂಪದಲ್ಲಿ ಬಿದ್ದ ನೀರಿಂದ ತಣಿದು ಇಂದು ನಾವು ನೋಡುತ್ತಿರುವ ಜಗತ್ತಾಗಿದೆ. ಆಗ ಸಾವಿರಾರು ವರ್ಷಗಳು ಬಿದ್ದ ಮಳೆಯಿಂದ ಈಗ ನಾವು ನೋಡುತ್ತಿರುವ ಸಾಗರ, ನದಿಗಳು ಹುಟ್ಟಿಕೊಂಡವು. ಹೀಗೆ ರೂಪುಗೊಂಡ ನೀರಿನ ಜೀವ ನೀಡುವ ಅಂಶದಿಂದ ಎಲ್ಲ ರೀತಿಯ ಜೀವಗಳು ಬೆಳೆದವು. ನಾವು ಸಹ ಬೆಳೆದದ್ದು ಇದೇ ರೀತಿಯಲ್ಲೇ. ನದಿ, ಸಾಗರ,...