• ಕಡೇ ಜಾತ್ರೆ

    ಸಾವು ಬಳಿ ಬಂದಾಗ ಹೊಯ್ದಾಟ ಜೋರು, ಒಟ್ಟಾಗಿ ಸೇರಿಕೊಂಡು ನಲಿದಾಡಿದೆ ಊರು; ಬಿಗಿಯಾಗಿ ಗಾಳಿ ಬೀಸಿದರೆ ಬೆಂಕಿಯೇ ಆರುವುದು, ನೀರ ಮೇಲಿನ ಜೀವನ ಅದೆಶ್ಟು ದಿನ ಉಳಿವುದು; ನಲಿದಾಡು ಕುಣಿದಾಡು ಹುಚ್ಚೆದ್ದು ಓಡು, ಇನ್ಮುಂದೆ ಜಗವೆಲ್ಲ ಮರಣದ ಬೀಡು; ಎದೆಯಲ್ಲಿ ಉಸಿರೇ ನಿಲ್ಲುತ್ತಿಲ್ಲ ಈಗ, ಬದುಕಿನ ಕೊನೆಗೆ ಅರ್ಪಣೆ ಈ ಸಂಧ್ಯಾರಾಗ; ಸಾವಿಂದು ನಡೆಸಿದೆ ಊರಲ್ಲಿ ಜಾತ್ರೆ, ಜನರೇ ಎಳೆಯುತ್ತಿರುವರು ಅದರ ತೇರು; ಮುಗಿಯಲು ಜಾತ್ರೆ ಮುಗಿವುದು ಯಾತ್ರೆ, ಶಾಂತಿಯಿಂದ...


  • ತರ್ಕ

    ಸಕಲವೂ ಅವನಿಂದ ಅಂತಾದರೆ, ಸಕಲವೂ ಅವನ ಇಶ್ಟ ಅಂತಾದರೆ, ನಾ ಮಾಡೋ ಪಾಪಗಳು ಕೂಡ ಅವನಿಂದ ಅಂತಲ್ವ? ನಾ ಬರಿ ಪಾತ್ರದಾರಿ, ಅವನೇ ಸೂತ್ರದಾರಿಯಾದರೆ, ನಾ ಮಾಡೋ ಕೆಲಸಗಳಿಗೆಲ್ಲ ಅವನೇ ಕಾರಣ ಅಂತಲ್ವ? ನಾ ಮಾಡೋ ಊಟಕ್ಕೂ ಅವನೇ ಕಾರಣ, ನಾ ನೋಡೋ ನೋಟಕ್ಕೂ ಸಹ... ಹೀಗಿದ್ದಾಗ ನಾನು ಮಾಡಿದ್ದು ಪಾಪ ಅಂತ ಹೇಳೋದು ಯಾಕೆ?? ಇದು ದೇವರು ನನ್ನಿಂದ ಮಾಡಿಸಿದ್ದು, ಅಂತ ಹೇಳಬಹುದಲ್ವ? ಅವನಿಗೆ ಮಾಡಬೇಕು ಅನಿಸಿದನ್ನ, ನನ್ನಿಂದ...


  • ಬೇಸಿಗೆ

    ಮತ್ತೆ ಬಂದಿದೆ ಬೇಸಿಗೆ, ನಮ್ಮ ಬಾಳ ಹೊಸಿಲಿಗೆ, ಹಸಿರು ಹುಲ್ಲು ಒಣಗಿ, ಹಳದಿ ಬಣ್ಣಕೆ ತಿರುಗಿ, ಮರದ ಎಲೆಗಳು ಉದುರಿ, ಹೊಸ ಜೀವಗಳು ಚಿಗುರಿ, ಮೆರಿತಿದ್ದ ಚಳಿಗೆ, ಬಿರುಸು ಮುಟ್ಟಿಸುತಾ ಹೊರಟು ಬಂದಿದೆ ಬೇಸಿಗೆ. ಹೊಲ ಗದ್ದೆಗಳಲಿ ಕೆಲಸವಿಲ್ಲ, ಏನು ಮಾಡುವುದೊ ಬದುಕಿಗೆ? ಯಕ್ಷಗಾನ, ಬಯಲಾಟ, ನಾಟಕ ತಿರುಗಾಟ ತಂದಿತು ತನ್ನೊಡನೆ ಬೇಸಿಗೆ. ಮುದುಡಿ ಮಲಗುವ ಕಾಲವಲ್ಲ, ಮಕ್ಕಳು ಇಳಿವರು ಬೀದಿಗೆ, ಒಂದಾದಮೇಲೊಂದು ಆಟದ ಹರಕೆ, ನಿಜ ಮಾಡುತ ಬಂದಿತು...


  • ನನ್ನ ಓಲೆ

    ಸಾಗರದಲೆಗಳ ಮೇಲೆ ತೇಲಿಬಂದು ತಲುಪಿದೆ ನನ್ನ ಓಲೆ, ಮಿತಿಮೀರಿ ನಿಂತಿದೆ ಇಂದು, ಮನದ ಬಯಕೆಗಳ ಲೀಲೆ, ಹಾದಿಗೊಂದು ತಿರುವಿದೆ, ನಿಂತು ನೋಡುವ ಇಂದು, ದೂರದೂರಲಿ ನಿಂತು ಕರೆದಿದೆ ಬದುಕ ಗುರಿಯ ಬಿಂದು. ಎಂದೋ ಹುಟ್ಟಿಕೊಂಡಿತು ಎಲ್ಲವ ಮೀರುವ ನಿಲುವು, ಹೊಸ ದಾರಿಯ ಹುಡುಕಿ ಕೊಟ್ಟಿದೆ, ಬದುಕ ನಿತ್ಯ ತಿರುವು. ನಾಳೆಯ ಬಯಕೆಯಲಿ ಆಚರಿಸುವೆ ನಾನು ಈ ದಿನದ ಹಬ್ಬ, ನಿತ್ಯ ಜೀವನದ ಹೋರಾಟದಲಿ ಗೆಲ್ಲುವ ತವಕದಲಿ ನಾನು ಒಬ್ಬ. ನಿತ್ಯದ...


  • ಇದು ನಿಜವಾದ ಕಥೆ

    ಬಾತ್ರೂಮಿನಲ್ಲಿ ಕೂತಿದ್ದಾಗ ಅವನಿಗೆ ಒಂದು ಪ್ರಶ್ನೆ ಕಾಡೋಕೆ ಶುರು ಆಯ್ತು.. ಅಷ್ಟಕ್ಕೂ ಯಾರಿಗೋಸ್ಕರ ನಾನು ಬದುಕಿರ್ಬೇಕು.. ಯಾರು ನಿಜವಾಗಲೂ ನನ್ನ ಪ್ರೀತಿಸ್ತಾ ಇದ್ದಾರೆ.. ನಾನ್ ಬದ್ಕೋದು ಯಾರಿಗೆ ಬೇಕು ಎಂದು.. ಮೊನ್ನೆ ಮೊನ್ನೆ ಕೆಲ್ಸ ಸಿಗೋವರ್ಗೂ ಬರೇ ಮನೆಯಲ್ಲಲ್ಲ.. ಬೀದಿ ತುಂಬಾ ಅಪ್ಪ ಅಮ್ಮ ಓಡಾಡಿಸಿಕೊಂಡು ಹೊಡೆದಿದ್ದರು. ತಿಂಗಳ ಸಂಬಳ ಅನ್ನೋದೊಂದು ಬರೋವರೆಗೂ ತಂಗಳೇ ಗಟ್ಟಿಯಾಗಿತ್ತು. ಈಗ ಒಮ್ಮೆಲೇ "ನಿನ್ನನ್ನು ಸಾಕಿ ದೊಡ್ಡವನಾಗಿ ಮಾಡಲು ನಾವು ಸಾಲ ಗೀಲ ಮಾಡಿ...