• Mistakes of my Chatni

    ಚಟ್ಣಿ ಮಾಡೋದನ್ನ ಸಣ್ಣೋನಾಗಿದ್ದಾಗಿಂದ್ಲೂ ದೂರದಿಂದ ನೋಡ್ತಿದ್ದಿದ್ದೆ ನೆನಪು. ಒಳಕಲ್ಲಲ್ಲಿ ಕಾರ ಅರಿತಿದ್ದ ನೋಡ್ಕೊಂಡು ಕೂತಿರತಿದ್ದೆ. ಆ ಕಲ್ಲ ತಿರುಗಿಸೋಕೆ ನನ್ನ ಕೈಗಿತ್ತರೆ ಅದರಲ್ಲಿ ಒಂದು ಸಂತಸ. ಬಹಳ ಕೇಳಿದ್ರೆ ಕಲ್ಲು ತಿರುಗಿಸೋಕೆ ಕೊಡೋರು, ಆದ್ರೆ ಕೈ ಹಾಕಿ ಪದಾರ್ತಗಳ ಒಳಕ್ಕೆ ದಬ್ಬೋಕೆ ಬಿಡ್ತಿರಲಿಲ್ಲ. ಹಂಗೆನಾರು ಬಿಟ್ರೆ ಅದರಲ್ಲಿ ಬೆರಳು ಇರುಕಿಸಿಕೊಳ್ಳದೆ ಪದಾರ್ಥಗಳ ದಬ್ಬಿದ್ರೆ ಅದು ಇನ್ನೊಂದು ಸಾಧನೆ ಮಾಡಿದಂಗೆ ಅನ್ಸೋದು. ಒಂದಶ್ಟು ವರ್ಶ ಕಳೆದು, ಸ್ವಲ್ಪ ದೊಡ್ಡೋನಾದ್ಮೇಲೆ, ನಂಗೆ ಕಲ್ಲಲ್ಲಿ...


  • ಹೆಂಗೆ

    ನಾವು ಕೊಡದೇ ತಿರುಗಿ ಸಿಗೋದೆಂಗೆ, ನೀರು ಆವಿಯಾಗದೆ, ಮಳೆ ಸುರಿಯೋದು ಎಲ್ಲಿಯ ಬಗೆ? ನಾವು ಕೊಡದೇ ತಿರುಗಿ ಕೇಳೋದೆಂಗೆ? ಕೂಗದೆ ದನಿ, ತಿರುಗಿ ಬರಲು ಕಾಯುವಂಗೆ. ಬೀಜ ನೆಟ್ಟರೇನೆ ಬೀಳೊ ಮಳೆಗೆ ಬೆಳೆ, ಕಣ್ಣು ಬಿಟ್ಟರೇನೆ ಕಾಣೊ ಬೆಳಕಿಗೆ ನೆಲೆ. ನಾವು ಕೊಡದೇ ತಿರುಗಿ ಕೇಳೋದೆಂಗೆ? ನಿತ್ಯ ಪೂಜೆ ಮಾಡಿ ದೇವರ ಒಲಿಸಿಕೊಳ್ಳುವಂಗೆ. ನಾವು ಕೊಡದೇ ತಿರುಗಿ ಬಯಸೋದೆಂಗೆ, ಹೊರಳಿ ಹೊರಳಿ ಎತ್ತೆಂದಳುವಾ ಮಗುವಂಗೆ. ನಾವು ಕೊಡದೇ ತಿರುಗಿ ಕೇಳೋದೆಂಗೆ,...


  • ಬದುಕು

    ಎಲ್ಲಿ ಕಳೆದು ಹೋದೆಯೇ ಬದುಕೆ, ಹುಡುಕುತಿರುವೆ ನಿನ್ನ,. ಕರುಣೆ ತೋರು ಬಾ, ಮತ್ತೆ ಬಿಗಿದಪ್ಪು ನನ್ನ. ಸುತ್ತಲಿರುವ ಗಾಳಿಯಂಗೆ ಇದ್ದರೂ ಸಿಗಲಾರೆ, ಹಿಡಿಯಲಿ ಹೇಗೆ ನಿನ್ನ, ಸರಿದಿರುವೆ ಈ ಕೈಯ್ಯಾರೆ. ಕನಸಂತೆ ನೀನು, ನನಸಾಗು ಬೇಗ, ಅರಿವಿಗೆ ಬರಬೇಕು, ತೆರೆದು ಹಾಕಿರುವ ಬೀಗ. ಎಲ್ಲಿ ಉಳಿದು ಹೋದೆಯೇ ಬದುಕೆ, ಬಂದ ಹಾದಿಯಲ್ಲಿ ನಿನ್ನ ಹುಡುಕಬೇಕೆ? ಅಲೆಸಬೇಡ ನನ್ನ ಮುಗಿಯದ ಬಯಲಲ್ಲಿ, ಬೇಗ ಮಳೆ ಸುರಿಸು ಅಂತರಂಗದಲ್ಲಿ. ಮತ್ತೆ ಬದುಕಬೇಕಿದೆ ಈಗ,...


  • ನಾವು ಗೆಲ್ಲಬೇಕು

    ನಡುವಲ್ಲಿ ಒಂದು ಸುಡುಗಾಲ ಬೇಕು! ಬರಗಾಲವೂ ನಮಗೆ ಯುಗಾದಿಯಾಗಬೇಕು. ಕೋಟಿ ಯುಗ ಸೋತಿರುವಲ್ಲಿ ನಾವು ಗೆಲ್ಲಬೇಕು! ಜೀವನದಿ ದಾರಿ ಕವಲೊಡೆದೇ ಸಾಗಬೇಕು ಬರೆದಾಗ ಸ್ನೇಹಗೀತೆಯ ಸ್ವರ್ಣಾಕ್ಷರದಲ್ಲೇ ಇರಬೇಕು. ಕೋಟಿ ಜನ ಬೇರೆಯಾದಲ್ಲಿ ನಾವು ಸೇರಬೇಕು! ಭಿನ್ನತೆ ಏನೇ ಇರಲಿ ಹಗಲು ಇರುಳು ಬೇಕು ಕೊರತೆ ಏನೇ ಇರಲಿ ಒಬ್ಬರಿಗೊಬ್ಬರು ಇರಬೇಕು. ಕೋಟಿ ಯೋಚನೆ ಸೋತಿರುವಲ್ಲಿ ನಾವು ಗೆಲ್ಲಬೇಕು! - ಆದರ್ಶ


  • ಉರಿ

    ಬೆಂಕಿಯಿದ್ದಾಗ ಉರಿದುಬಿಡು, ಆರಿದಾಗ ತಣ್ಣಗಿರೋದಿದೆ, ರಭಸವಿದ್ದಾಗ ಹರಿದುಬಿಡು, ಸೆಳೆತ ಕಳೆದಮೇಲೆ ನಿಲ್ಲೋದಿದೆ. ಜಿಗಿದಾಡು, ಒದ್ದಾಡು ಮಣಿಯಲೇಬೇಕು, ಮೆರೆದಾಡು, ಸುಮ್ಮನಿರು, ಅಳಿಯಲೇಬೇಕು. ಒದ್ದಾಡಿ, ಜಿಗಿದಾಡಿ ಮಣಿಬೇಕು ಎಂದಾಗ, ಜಿಗಿದಾಡೇ ಮಣಿಯುವ. ಮೆರೆದಾಡಿದರೂ, ಸುಮ್ಮನಿದ್ದುರೂ ಅಳಿಯಬೇಕು ಎಂದಾಗ, ಮೆರೆದಾಡೇ ಅಳಿಯುವ. ನೇಸರ ಹೊತ್ತಿ ಉರಿದರೂ ಕೊನೆಗೆ ತಂಪು, ಭೂಮಿ ಬಿರುಕಿ ಸಿಡಿದರೂ ಕೊನೆಗೆ ಸಂಪು, ಆಳಾಗು ಅರಸನಾಗು, ಮಣ್ಣಾಗೋದಿದೆ, ಹೊತ್ತಿ ಉರಿದೇಬಿಡು ಇರುವಾಗ, ಏನಿಲ್ಲ ತಪ್ಪು. ಒಳಗೆ ಕಿಡಿ ಇದ್ದಾಗ ಹೊತ್ತಿಕೊಂಡುಬಿಡು. ಎಲ್ಲ...