ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಗುಟ್ಟು
ಎಲ್ಲರಿಂದ ಜೋಪಾನವಾಗಿ ಬಚ್ಚಿಟ್ಟ ಗುಟ್ಟು, ಇರುವುದಾದರೂ ಹೇಗೆ ನಾನು ನಿನ್ನನು ಕೊಟ್ಟು? ಹಳೆಯ ಪೋಲಿ ಕನಸೆಲ್ಲ ಹಿತ್ತಲಲ್ಲೇ ಬಿಟ್ಟು, ಹಿಡಿದಿರುವೆ ಬರಿಯ ನಿನ್ನ, ಸಮಯವ ಬದಿಗಿಟ್ಟು! ಜಾತ್ರೆಯಲಿ ಕಿರುಚಿದರೂ ಕೇಳದ ಮಾತಿಗೆ ಬಂದಂತಿದೆ ಈಗ ಮಾರ್ದನಿಯ ಮುತ್ತಿಗೆ, ನಡುರಾತ್ರಿ ಸುತ್ತಲೂ ಯಾರೂ ಇರದ ಹೊತ್ತಿಗೆ ಗಾಳಿಯೇ ಮೌನವಾಗಿದೆ ನೀ ಹೇಳುವ ಗುಟ್ಟಿಗೆ! ಯಾರಿಗೂ ಹೇಳದೆ ಬಂದ ಪ್ರೀತಿಗೆ ಗುಟ್ಟಾಗಿ ನೀಡಿರುವೆ ಮುದ್ದಾದ ದೇಣಿಗೆ, ನನಗೂ ಸಿಗದಂತೆ ಉಳಿದಿರುವ ಗುಟ್ಟು ನೀನಾಗಿರು...
-
ವಾಯುಭಾರ
ಬಂದರೆ ನೀನು ನನ್ನೆಡೆಗೆ ನುಗ್ಗುತ, ನನ್ನ ಸುತ್ತೆಲ್ಲ ಒಮ್ಮೆಗೆ ವಾಯುಭಾರ ಕುಸಿತ. ಹರಿದಾಗ ನಿನ್ನ ಪರಿಮಳ ನನ್ನ ಸುತ್ತ, ಇಡೀ ಪ್ರಪಂಚಕೆ ಆದಂತಾಗಿದೆ ಈಗ ವಾಯುಭಾರ ಕುಸಿತ! ಕನಸಲ್ಲಿ ಬರಲು ನೀ ನನ್ನ ಮನವ ಸೇರುತ, ನಿದಿರೆಯಲ್ಲೇ ಉಂಟಾಗಿದೆ ಜೀವದ ವಾಯುಭಾರ ಕುಸಿತ. ಮರಣದಲ್ಲಿ ಬಂದುಳಿಸಿದೆ ನಿನ್ನ ಸ್ನೇಹವ ತೋರುತ, ಬಿರುಗಾಳಿಯೇ ತಬ್ಬಿ ಮಲಗಿದೆ ಇಲ್ಲಿ ನನ್ನ ಮನವ, ಉಂಟಾಗಿದೆ ಈಗ ನನ್ನ ಜಗದ ವಾಯುಭಾರ ಕುಸಿತ! ತಂಗಾಳಿಯು ತೇರಲ್ಲಿ...
-
ಸಣ್ಣ ಉಳಿತಾಯ
ಮನುಷ್ಯನ ಉಗಮವಾದಾಗಿನಿಂದ ನೀರು ಬರೀ ಬಳಕೆಯ ವಸ್ತುವಾಗಿಯೇ ಉಳಿದಿದೆ ಹೊರತು, ಉಳಿಸಬೇಕಾದ ವಸ್ತುವೆಂದು ಅರಿತವರು ತೀರಾ ಕಡಿಮೆ. ಇತ್ತೀಚಿಗಷ್ಟೇ ನೀರನ್ನು ಉಳಿಸಬೇಕು, ಮತ್ತದರ ಬಳಕೆ ಕಡಿಮೆ ಮಾಡಬೇಕು ಎಂಬ ಆಲೋಚನೆ ಹೊರ ಬಂದಿದ್ದು. ಈಗ ಬಳಸುತ್ತಿರುವ ವೇಗದಲ್ಲಿ ನೀರನ್ನು ಮುಂದೂ ಬಳಸುತ್ತಿದ್ದರೆ, ಇನ್ನು ಕೆಲವೇ ಶತಮಾನಗಳಲ್ಲಿ ಇಡೀ ಭೂಮಿಯ ಜನರು ಕುಡಿಯುವ ನೀರಿಲ್ಲದೆ ಸಾಯುವ ಸ್ಥಿತಿಯ ತಲುಪಬಹುದು. “ಜೀವನಾನ ಇವತ್ತು ಅನುಭವಿಸಬೇಕು ಅಂತ ನಮ್ಮ ಜನ ತಮ್ಮ ಮುಂದಿನ ತಲೆಮಾರಿಗೂ...
-
ಆತ್ಮೀಯ
ಬಸ್ರೂರು ಪ್ರೌಢಶಾಲೆಯಲ್ಲಿ ಇದ್ದ ಸಮಯ ಅದು. ಸಮಾಜ ಅಧ್ಯಾಪಕರು ಒಬ್ಬ ರಾಜನ ಬಗ್ಗೆ ಹೇಳುತ್ತ " ಅವನು ಆ ಯುದ್ದದಲ್ಲಿ ಸತ್ತನು" ಅಂದ್ರು. ತಟ್ಟನೆ ಅವರೇ "ರಾಜರಿಗೆ, ದೊಡ್ಡ ಮನುಷ್ಯರಿಗೆ ಹಾಗೇ ಸತ್ತರು ಅನ್ನಬಾರದು, ಮರಣ ಹೊಂದಿದ ಅನ್ನಬೇಕು" ಎಂದರು. ಹಾಗೇ ಮುಂದುವರಿಸಿ "ನೀವು ಮನೆಯ ಹತ್ತಿರ ಯಾರಾದರೂ ಸತ್ತರೆ ಏನು ಹೇಳ್ತೀರಾ?" ಎಂದು ಒಬ್ಬೊಬ್ಬರಿಗೆ ಕೇಳಿದರು. ಆಗ ಒಬ್ಬ ಕೊನೆಯುಸಿರು ಎಳೆದರು ಎನ್ನುತ್ತೇನೆ ಎಂದು ಉಸಿರು ಎಳೆದುಕೊಂಡರೆ, ಇನ್ನೂಬ್ಬ...
-
ಕತ್ತಲ ಸಮಯ
ಎಂತೆಂಥ ಕತ್ತಲೆಯ ಸಮಯ ಕಾದಿವೆಯೋ ನಮಗೆ, ಕಣ್ಣಿನ ಬೆಳಕನು ಮರೆಮಾಚಲು, ನೆನೆದರೆ ಒಮ್ಮೆಲೆ ಭಯವಾಗುವುದು ಮನಕೆ ನಿಂತಲ್ಲೇ ನಡುಗುವುದು ಕಾಲು. ಓಡುವುದು ಹೇಗೆ ಉಸುಕಿನಲ್ಲಿ, ನಡುಗುತಿರುವಾಗ ನೆಲವು ಅಡಿಯಲ್ಲಿ. ಏಳುವುದು ಸರಿಯೇ ನಸುಕಿನಲ್ಲಿ, ಸೂರ್ಯನೇ ಮೂಡದಿರೆ ಮೂಡಣದಲ್ಲಿ! ಇನ್ನೆಂಥ ಕತ್ತಲೆಯ ಕಾಲವೂ ಕಾದಿದೆಯೊ ನಮ್ಮಯ ದೂರದ ನೋಟದ ಆಚೆಗೆ. ಮರಣವೇ ಎದುರಿಗೆ ನಿಲ್ಲುವ ಭಾವನೆ, ಮರೆತರೂ ನಮ್ಮನು ನಾವು ಅರೆಘಳಿಗೆ. - ಆದರ್ಶ